ಚರ್ಚಿಸಿದ ಪ್ರಮುಖ ವಿಷಯಗಳು
- .ಶನಿವಾರದ ಶಾಲಾ ವೇಳಾಪಟ್ಟಿಯನ್ನು ಸೂಕ್ತವಾಗಿ ನಿಗದಿಪಡಿಸುವ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
2. ಎಲ್ಲಾ ತರಗತಿಗಳಿಗೆ ಸಂಬಂಧಿಸಿದಂತೆ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಟಿಸಿಯನ್ನು ಆನ್ಲೈನ್ನಲ್ಲಿ “ಇನ್” (TC In) ಮಾಡಿಕೊಳ್ಳುವ Option ಅನ್ನು ತೆರೆಯಲು ಒತ್ತಾಯಿಸಲಾಯಿತು.
3 .ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲೆಗೆ ಬಡ್ತಿಯನ್ನು (Promotion) ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಆಗ್ರಹಿಸಲಾಯಿತು.
4 . ಒಂದನೇ ತರಗತಿಯ ದಾಖಲಾತಿಯ ವಯೋಮಿತಿಯನ್ನು ಸಡಿಲಿಸಿ, ಪ್ರಸ್ತುತ ಇರುವ 5 ವರ್ಷ 10 ತಿಂಗಳು ಬದಲು 5 ವರ್ಷ 6 ತಿಂಗಳಿಗೆ ನಿಗದಿಗೊಳಿಸಲು ವಿನಂತಿಸಲಾಯಿತು.
5 .HRMS ತಂತ್ರಾಂಶದಲ್ಲಿರುವ ಎಲ್ಲಾ ದೋಷಗಳನ್ನು ಸರಿಪಡಿಸಲು ಹಾಗೂ ಶಿಕ್ಷಕರ ಇತರ ಸಮಸ್ಯೆಗಳನ್ನು ನಿಗದಿತ ಅವಧಿಯಲ್ಲಿ ಬಗೆಹರಿಸಲು ರಾಜ್ಯದ ಎಲ್ಲಾ ಉಪನಿರ್ದೇಶಕರು (DDPI) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಸೂಕ್ತ ಆದೇಶ ವನ್ನು ಹೊರಡಿಸಲಾಯಿತು.
ರಾಜ್ಯಾಧ್ಯಕ್ಷರಾದ ಚಂದ್ರಶೇಖರ ನುಗ್ಗಲಿ ಇವರ ನೇತೃತ್ವದಲ್ಲಿ
ಶ್ರೀಮತಿ ಪ್ರಮಿಳಾ ಕಾಮಳಹಳ್ಳಿ, ಸಹ ಕಾರ್ಯದರ್ಶಿಗಳು, ರಾಜ್ಯ ಸಂಘ, ಶ್ರೀ ಶರಣಬಸನಗೌಡರು ಅಧ್ಯಕ್ಷರು, ಕೊಪ್ಪಳ ಜಿಲ್ಲೆ, ಶ್ರೀ ಜಿ.ಎಮ್. ಹಿರೇಮಠ ಅಧ್ಯಕ್ಷರು, ಚಿಕ್ಕೋಡಿ ಜಿಲ್ಲೆ ಶ್ರೀ ಸಿದ್ರಾಮ ಲೋಕನ್ನವರ ಸಂಘಟನೆಯ ಹಿರಿಯ ನಾಯಕರು, ಶ್ರೀ ಹನುಮಂತರವರು, ಕಾರ್ಯದರ್ಶಿಗಳು, ಕೊಪ್ಪಳ ಜಿಲ್ಲೆ, ಹಾವೇರಿ ತಾಲೂಕಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.