ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ಮುಖ್ಯಾಂಶಗಳು.
ನವೋಲ್ಲಾಸದೊಂದಿಗೆ ನವೀನ ಚಿಂತನೆಗಳು & ಶಿಕ್ಷಕರ ಸಮಸ್ಯೆಗಳು ಹಾಗೂ ಪರಿಹಾರ ಕುರಿತ ಸುದೀರ್ಘ & ಅರ್ಥ ಗರ್ಭಿತ “ಕಾರ್ಯಕಾರಿ ಸಮಿತಿ ಸಭೆ” ಯಶಸ್ವಿಯಾಯಿತು.
- ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಪ್ರೌಢ ಶಾಲಾ ಸಹ ಶಿಕ್ಷಕ ವೃಂದಕ್ಕೆ ಬಡ್ತಿಯನ್ನು ಜುಲೈ-august ರೊಳಗೆ ಕೊಡಿಸುವುದು.
- ಕರ್ತವ್ಯ & ನಿರಂತರ ತಂತ್ರಾಂಶಗಳನ್ನು ಹಿಂಪಡೆಯುವಂತೆ, ಅಥವಾ ಸುಲಭವಾಗಿ ನಿರ್ವಹಿಸುವ ರೀತಿಯಲ್ಲಿ ಮಾರ್ಪಡಿಸುವಂತೆ ಒತ್ತಾಯ
- ವರ್ಗಾವಣೆ ನಿಯಮಗಳಿಗೆ ಅತ್ಯಗತ್ಯ ತಿದ್ದುಪಡಿ ಮಾಡಿ, ಶೀಘ್ರವಾಗಿ ಪ್ರಕ್ರಿಯೆ ಪ್ರಾರಂಭಿಸುವಂತೆ ಕ್ರವಹಿಸುವುದು.
- LKG -puc ವರೆಗೂ ಉಚಿತ ನೋಟ್ ಬುಕ್ ವಿತರಣೆಗೆ ಶೀಘ್ರವಾಗಿ ಚಾಲನೆ ನೀಡುವುದು.
- KASS ಯೋಜನೆಯನ್ನು ರದ್ದುಪಡಿಸುವಂತೆ ಅಥವಾ ಎಲ್ಲಾ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆಗೆ ಒತ್ತಾಯಿಸುವುದು.
- MDM ಖಾತೆಯನ್ನು ಈ ಹಿಂದಿನಂತೆ HM+ಮುಖ್ಯ ಅಡುಗೆದಾರರ ಜಂಟಿ ನಿರ್ವಹಣೆಗೆ ಒತ್ತಾಯಿಸುವುದು.
- TEXT BOOK, UNIFORM, SHOES… ಸೌಲಭ್ಯಗಳನ್ನು ಪ್ರತಿ ಶಾಲೆಯ ದಾಖಲಾತಿಗೆ 100% ಅನುಗುಣವಾಗಿ, ನೇರವಾಗಿ ಶಾಲೆಗೆ ತಲುಪಿಸುವಂತೆ ಒತ್ತಾಯಿಸುವುದು.
- LBA, BRIDGE course ಗೊಂದಲಗಳನ್ನು ಪರಿಹರಿಸುವಂತೆ ಒತ್ತಾಯಿಸುವುದು.
- ಮೊಟ್ಟೆ ದರವನ್ನು ₹7-₹8 ರವರೆಗೆ ಹೆಚ್ಚಿಸಲು ಒತ್ತಾಯಿಸುವುದು.
- ದ್ವಿಭಾಷಾ ಪದ್ಧತಿಯ ಗೊಂದಲಗಳನ್ನು ಪರಿಹರಿಸುವಂತೆ ಒತ್ತಾಯಿಸುವುದು
- HRMS 2.0 ದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಅತ್ಯಂತ ಶೀಘ್ರವಾಗಿ ಪರಿಹರಿಸಲು ಒತ್ತಾಯಿಸುವುದು.
- ಟಿಇಟಿ ವಿರೋಧಿಸಿ ಜುಲೈ-26 ತಿಂಗಳಲ್ಲಿ ರಾಜ್ಯ ಮಟ್ಟದ ಮತ್ತು Dec 26ರ ಒಳಗೆ ರಾಷ್ಟ್ರ ಮಟ್ಟದ ಹೋರಾಟ ಮಾಡಲು ನಿರ್ಧರಿಸಲಾಯಿತು.
- ಬಳ್ಳಾರಿ ವಿಜಯನಗರ ಜಿಲ್ಲೆಗಳ ಅಭಿಮತ ವರ್ಗಾವಣೆ 2.0 ಮಾಡಲು ಒತ್ತಾಯಿಸುವುದು.
- ಗ್ರಾಮೀಣ ಕೃಪಾಂಕ ರಹಿತ, ಸಹಿತ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸುವುದು.