ದಕ್ಷಿಣ ಕನ್ನಡ ಶಿಕ್ಷಕರ ಸಂಘದ ವತಿಯಿಂದ ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನ ಗುರುಸೇವೆ ಇದು ನಮ್ಮ ಜವಾಬ್ದಾರಿ ಶೀಘ್ರದಲ್ಲಿಯೇ ಪ್ರಾರಂಭ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು
ದಕ್ಷಿಣಕನ್ನಡ ಜಿಲ್ಲಾ ಘಟಕ

ದಕ್ಷಿಣ ಕನ್ನಡ ಜಿಲ್ಲೆಯ ಗೌರವಾನ್ವಿತ ಶಿಕ್ಷಕ ಬಂಧುಗಳೇ,

ಈಗಾಗಲೇ ನಮ್ಮ ತಂಡ ಜಿಲ್ಲೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿರಬಹುದು.

ಸಂಘಟನೆಯನ್ನು ಮತ್ತಷ್ಟು ಶಿಕ್ಷಕರನ್ನು ತಲುಪುವುದಕ್ಕೋಸ್ಕರ ತಾಲೂಕುವಾರು ವಾಟ್ಸಪ್ಪ್ ಗ್ರೂಪ್ ಗಳನ್ನು ರಚಿಸಲಾಗಿದ್ದು ತಾವೆಲ್ಲ ಅದರ ಭಾಗವಾಗಿರುವುದು ಬಹಳ ಸಂತೋಷದಾಯಕವಾದ ವಿಚಾರವಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಾದ ನಾವು ಅನೇಕ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಕೊಳ್ಳಬೇಕಿದೆ.
ಕರ್ನಾಟಕ ರಾಜ್ಯದ ಸಂಘಟನೆಗಳ ಇತಿಹಾಸದಲ್ಲಿ ಮೊದಲ ಬಾರಿಗೆ ದಕ್ಷಿಣಕನ್ನಡ ಜಿಲ್ಲಾ ಘಟಕವು ವಿವಿಧ ತಾಲೂಕು ಘಟಕಗಳ ಸಹಯೋಗದೊಂದಿಗೆ,
ಶಿಕ್ಷಕರ ಸಮಸ್ಯೆಗಳಿಗೆ ಕಿವಿಯಾಗಿ,
ಸಮಸ್ಯೆಗಳ ಪರಿಹಾರ ಕಾರ್ಯಕ್ಕಾಗಿ ಇಲಾಖಾ ಅಧಿಕಾರಿಗಳ ಸಂಪೂರ್ಣ ಸಹಕಾರದೊಂದಿಗೆ ಅತೀ ಶೀಘ್ರದಲ್ಲೇ
ಗುರುಸೇವೆ ಇದು ನಮ್ಮ ಜವಾಬ್ದಾರಿ ಅನ್ನುವ ವಿಶೇಷ ಕಾರ್ಯಕ್ರಮವನ್ನು ಜಿಲ್ಲಾ ಮತ್ತು ತಾಲೂಕು ಸಂಘ ಜಂಟಿಯಾಗಿ ಪ್ರಾರಂಬಿಸಲಿದ್ದೇವೆ.ಕಾರ್ಯಕ್ರಮದ ಕುರಿತು ಹೆಚ್ಚಿನ ವಿವರಗಳನ್ನು ಕೆಲವೇ ದಿನಗಳಲ್ಲಿ ನಿಮ್ಮ ಮುಂದಿ ಡಲಿದ್ದೇವೆ ನಿಮ್ಮ ಸಂಪೂರ್ಣ ಸಹಕಾರವಿರಲಿ.

Sharing Is Caring:

3 thoughts on “ದಕ್ಷಿಣ ಕನ್ನಡ ಶಿಕ್ಷಕರ ಸಂಘದ ವತಿಯಿಂದ ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನ ಗುರುಸೇವೆ ಇದು ನಮ್ಮ ಜವಾಬ್ದಾರಿ ಶೀಘ್ರದಲ್ಲಿಯೇ ಪ್ರಾರಂಭ”

Leave a Comment