ಮಾನ್ಯ ಶಿಕ್ಷಣ ಸಚಿವರನ್ನು ಭೇಟಿಯಾಗಿ ರಾಜ್ಯ ಸಂಘದಿಂದ ಈ ಕೆಳಗಿನ ಮನವಿಗಳನ್ನು ಸಲ್ಲಿಸಲಾಯಿತು.ಹೆಚ್ಚಿನ ವಿವರ ಇಲ್ಲಿದೆ

1) ಪ್ರಾಥಮಿಕ ಶಾಲಾ ಸೇವಾನಿರತ ಪದವೀಧರ ಶಿಕ್ಷಕರಿಗೆ ಬಡ್ತಿಗಾಗಿ
ನಿಗದಿಗೊಳಿಸಿದ್ದ ಪರೀಕ್ಷೆ ರದ್ದುಗೊಳಿಸಿ 6 ರಿಂದ 8 ಕ್ಕೆ ಸೇವಾ
ಜೇಷ್ಠತೆಯನ್ನು ಪರಿಗಣಿಸಿ ಬಡ್ತಿ ನೀಡುವ ಕಡತವನ್ನು ಸಚಿವ
ಸಂಪುಟದಲ್ಲಿ ಮಂಡಿಸಿ ಆಡಳಿತಾತ್ಮಕ ಆದೇಶ ಹೊರಡಿಸುವುದು.


2)ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ಜಿಲ್ಲಾ HRMS ಕೋಶಗಳನ್ನು
ರಚಿಸಿ ಆಯಾ ಜಿಲ್ಲೆಯ HRMS ಸಮಸ್ಯೆಗಳನ್ನು ಜಿಲ್ಲಾ
ಹಂತದಲ್ಲೇ ಬಗೆಹರಿಸುವಂತೆ ವ್ಯವಸ್ಥೆ ಮಾಡುವುದು.


3)ಶಿಕ್ಷಕರ ವೇತನ ಸಮಸ್ಯೆಗಳನ್ನು ಹಾಗೂ ಇನ್ನಿತರ ಬಾಕಿ
ಕಡತಗಳನ್ನು ಚರ್ಚಿಸಲು ತಾಲ್ಲೂಕು, ಜಿಲ್ಲಾ ಹಂತದಲ್ಲಿ ‘ಜಂಟಿ
ಸಮಾಲೋಚನಾ ಸಮಿತಿ’ ರಚಿಸುವುದು.


4)ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳನ್ನು ತಕ್ಷಣ ಪ್ರಾರಂಭಿಸುವುದು.

Sharing Is Caring:

Leave a Comment