ಬೇಡಿಕೆ ಈಡೇರುವ ತನಕ ತರಬೇತಿ ಬಹಿಷ್ಕಾರ ಮುಂದುವರಿಸುವ ದಿಟ್ಟ ನಿರ್ಧಾರ ಪ್ರಕಟಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿವರ ಇಲ್ಲಿದೆ
????????????????????????????????????????
ಮಾನ್ಯ ಜಿಲ್ಲಾ / ತಾಲೂಕು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಆದ್ಯ ಗಮನಕ್ಕೆ
????????????????????????????????????????
ವಿಷಯ:-ತರಬೇತಿ ಬಹಿಷ್ಕಾರ ಚಳುವಳಿ ಮುಂದುವರಿಸುವುದರ ಬಗ್ಗೆ.
ಉಲ್ಲೇಖ : ಮಾನ್ಯ ನಿರ್ದೇಶಕರು ಡಿ.ಎಸ್.ಇ.ಆರ್.ಟಿ/ಎಸ್.ಎಸ್.ಕೆ/ಪ್ರಾ/ನಿಷ್ಠಾ-3.0 ತ/06/2021-22 ದಿನಾಂಕ :4-10-2021.ರವರ ಪತ್ಲ ಸಂಖ್ಯೆ
ಮೇಲಿನ ವಿಷಯ ಹಾಗೂ ಉಲ್ಲೇಖದನ್ವಯ ಜಿಲ್ಲಾ ಮತ್ತು ತಾಲೂಕು ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ದಿನಾಂಕ: 29-9-2021 ರಂದು ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನದಂತೆ
????????????????????????????????????????
ಶಿಕ್ಷಕರ ಹಲವಾರು ಸಮಸ್ಯೆಗಳ ತ್ವರಿತ ಈಡೇರಿಕೆಗಾಗಿ ಅದರಲ್ಲೂ ವಿಶೇಷವಾಗಿ
???? ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ
???? ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸುವುದು
???? ವರ್ಗಾವಣೆಯನ್ನು ತಕ್ಷಣ ಪ್ರಾರಂಭಿಸುವ ಕುರಿತು
????????????????????????????????????????
ಸರ್ಕಾರದ ಗಮನ ಸೆಳೆಯುವ ದೃಷ್ಟಿಯಿಂದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನದಂತೆ
✍️✍️✍️✍️✍️✍️✍️✍️✍️✍️
ನಿಷ್ಠಾ ಹಾಗೂ ಇಲಾಖೆ ಹಮ್ಮಿಕೊಳ್ಳುವ ಎಲ್ಲಾ ತರಬೇತಿಯನ್ನು ರಾಜ್ಯಾದ್ಯಂತ ಬಹಿಷ್ಕರಿಸಲು ತೀರ್ಮಾನವನ್ನು ಕೈಗೊಳ್ಳಲಾಗಿತ್ತು
????????????????????????????????????????.
ಸಂಘದ ಮನವಿಯನ್ನು ಪುರಸ್ಕರಿಸಿರುವ ಡಿ ಎಸ್ ಇ ಆರ್ ಟಿ ಯ ಮಾನ್ಯ ನಿರ್ದೇಶಕರು, ಇಂದು ಮಾನ್ಯ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಇವರಿಗೆ ಪತ್ರ ಬರೆದಿದ್ದು ಹಾಗೂ ರಾಜ್ಯ ಸಂಘಕ್ಕೂ ಪತ್ರ ಬರೆದು ಸಹಕಾರ ನೀಡಲು ಮನವಿ ಮಾಡಿಕೊಂಡಿದ್ದು, ಹಲವಾರು ಬಾರಿ ಶಿಕ್ಷಕರ ಸಂಘಟನೆ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಶಿಕ್ಷಕರ ಬೇಡಿಕೆಗಳು ಈಡೇರದೇ ಇರುವುದರಿಂದ ರಾಜ್ಯಾದ್ಯಂತ ತರಬೇತಿ ಬಹಿಷ್ಕಾರ ಚಳುವಳಿಯನ್ನು ಮುಂದುವರೆಸಲು ತೀರ್ಮಾನಿಸಲಾಗಿದ್ದು ರಾಜ್ಯದ ಸಮಸ್ತ ಶಿಕ್ಷಕರು ಯಾವುದೇ ಗೊಂದಲಕ್ಕೊಳಗಾಗದೇ, ತರಬೇತಿ ಬಹಿಷ್ಕಾರವನ್ನು ಮುಂದುವರಿಸಬೇಕೆಂದು ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆ ತಿಳಿಸಬಯಸುತ್ತೇವೆಈ
ಕುರಿತು ಜಿಲ್ಲಾ ಅಧ್ಯಕ್ಷರು ಕಾರ್ಯದರ್ಶಿಗಳು, ತಾಲೂಕು* ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸೂಕ್ತ ಕ್ರಮ ವಹಿಸಲು ಕೂಡ ವಿನಂತಿಸಲಾಗಿದೆ.
????????????????????????????????????????
ಶಂಭುಲಿಂಗನಗೌಡಪಾಟೀಲ
ಅಧ್ಯಕ್ಷರು
ಚಂದ್ರಶೇಖರ್ ನುಗ್ಗಲಿ
ಪ್ರಧಾನ ಕಾರ್ಯದರ್ಶಿ
ಹಾಗೂ
ರಾಜ್ಯ ಪದಾಧಿಕಾರಿಗಳು
????????????????????????????????????????
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ( ರಿ.) ಬೆಂಗಳೂರು