ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಕೂಟವು ಮೇ 30 ,31 ಮತ್ತು ಜೂನ್ 1 3 ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ

ಕ್ರೀಡಾಪಟುಗಳ ನೊಂದಣಿ ದಿನಾಂಕ: 30-05-2022ರಂದುಸಮಯ: ಬೆಳಗ್ಗೆ 10.00 ರಿಂದ ಸಂಜೆ 4.00 ವರೆಗೆ Online ನೊಂದಣಿ ಮಾಡಿರುವ ಕ್ರೀಡಾಪಟುಗಳಿಗೆ ಮಾತ್ರ ಕ್ರೀಡೆಗಳಲ್ಲಿ ಭಾಗವಹಿಸಲುಅವಕಾಶವಿದೆ. Online ನೊಂದಣಿ ಮಾಡದೇ ಇರುವವರಿಗೆ ಅವಕಾಶವಿರುವುದಿಲ್ಲ..

ಕ್ರೀಡಾಕೂಟದಲ್ಲಿ ಭಾಗವಹಿಸುವ ಮಹಿಳಾ ನೌಕರರಿಗೆ ಮಾತ್ರ ವಸತಿ ಸೌಲಭ್ಯಕಲ್ಪಿಸಲಾಗುವುದು. (ಲಘು ಹೊದಿಕೆಗಳನ್ನು ತರುವುದು)

ಪುರುಷ ನೌಕರರಿಗೆ ಬೆಂಗಳೂರಿನಲ್ಲಿ ಸಂಚಾರ ದಟ್ಟನೆ ಹಾಗೂ ಕ್ರೀಡಾಂಗಣದ ಹತ್ತಿರ ದಲ್ಲಿಸೂಕ್ತವಾದ ವಸತಿ ಸೌಲಭ್ಯ ಇಲ್ಲದಿರುವುದರಿಂದ, ತಾವುಗಳೇ ವಸತಿ ವ್ಯವಸ್ಥೆಗಳನ್ನುಮಾಡಿಕೊಳ್ಳುವುದು..

ರಾಜ್ಯ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಈ ಬಾರಿ ವಿಶೇಷ ನೆನಪಿನ ಕಾಣಿಕೆಗಳನ್ನುನೀಡಲಾಗುವುದು ಹಾಗೂ ರುಚಿ-ಶುಚಿಯಾದ ಭೋಜನವಿರುತ್ತದೆ.

• ದಿ: 30, 31ರ ಸಂಜೆ ಖ್ಯಾತ ಗಾಯಕರಾದ ಶ್ರೀ ವಿಜಯ ಪ್ರಕಾಶ್‌ರವರಿಂದ ಸಾಂಸ್ಕೃತಿಕಸಂಗೀತ ರಸ ಸಂಜೆ ಕಾರ್ಯಕ್ರಮಗಳಿರುತ್ತವೆ.

Sharing Is Caring:

Leave a Comment