C AND R UPDATE ಮಾಹಿತಿ

ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಬಿಸಿ ನಾಗೇಶ್ ಸಾಹೇಬರನ್ನು ಭೇಟಿ ಮಾಡಿ ಅಭಿನಂದಿಸಿ ಸಚಿವ ಸಂಪುಟಕ್ಕೆ C&R ಕಡತವನ್ನು ಮಂಡಿಸಲು ವಿನಂತಿಸಲಾಯಿತು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಬಿ.ಸಿ.ನಾಗೇಶ್ ಸಾಹೇಬರನ್ನು
ವಿಧಾನಸೌಧ ಅವರ ಕೊಠಡಿಯಲ್ಲಿ ಭೇಟಿ ಮಾಡಿ 6 ರಿಂದ 8ಕ್ಕೆ ಪ್ರತಿಶತ 40 ರಷ್ಟು ಶಿಕ್ಷಕರನ್ನು ಪರೀಕ್ಷೆ ರಹಿತವಾಗಿ ನಿಯುಕ್ತಿಗೊಳಿಸುವ ವೃಂದ ಮತ್ತು ನೇಮಕಾತಿ ನಿಯಮಗಳ ಕಡತಕ್ಕೆ ಎಲ್ಲ ಇಲಾಖೆಗಳಿಂದ ಅನುಮೋದನೆ ಸಿಕ್ಕಿದ್ದು, ಸದರಿ ಕಡತವನ್ನು ಬರುವ ಸಚಿವ ಸಂಪುಟಕ್ಕೆ ಮಂಡಿಸಬೇಕೆಂದು ವಿನಂತಿಸಲಾಯಿತು ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯರು ಬೇಗನೆ ತಮ್ಮ ಕೆಲಸ ಮಾಡಿಕೊಡಲಾಗುವುದೆಂದು ತಿಳಿಸಿದರು ಮಾನ್ಯ ಸಚಿವರಿಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ತುಂಬು ಹೃದಯದ ಧನ್ಯವಾದಗಳು.

IMG 20221103 WA0063
Sharing Is Caring:

Leave a Comment