ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ವೇತನ ಆಯೋಗದ ಮುಂದೆ ಮಂಡಿಸಿದ ಪ್ರಮುಖ ಅಂಶಗಳು

WhatsApp Group Join Now
Telegram Group Join Now

ಬೆಂಗಳೂರು: ಇಂದು 7ನೇ ವೇತನ ಆಯೋಗದಿಂದ ನಿಗದಿಗೊಳಿಸಿದ ಪ್ರಶ್ನಾವಳಿಗಳಿಗೆ ಕರ್ನಾಟಕ
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ರಾಜ್ಯದ ಶಿಕ್ಷಕರ ಕಾರ್ಯಭಾರ, ಜವಾಬ್ದಾರಿ ಕೆಲಸದ
ಒತ್ತಡ ಹಾಗೂ ಅವರ ವಿದ್ಯಾರ್ಹತೆ, ಶ್ರಮ ಇವೆಲ್ಲವುಗಳ ಆಧಾರದ ಮೇಲೆ ಹಾಗೂ ಕೇಂದ್ರ ಸರ್ಕಾರ
ಮತ್ತು ನೆರೆಹೊರೆ ರಾಜ್ಯಗಳಿಗಿಂತ ಶಿಕ್ಷಣದಲ್ಲಿ ಕರ್ನಾಟಕವು ಅತ್ಯುತ್ತಮ ಸ್ಥಾನದಲ್ಲಿದ್ದು, ರಾಜ್ಯದ
ಸಾಕ್ಷರತೆಯ ಪ್ರಮಾಣ ಶೇಕಡ 78.2% ರಷ್ಟಾಗಲು ಪ್ರಾಥಮಿಕ ಶಾಲಾ ಶಿಕ್ಷಕರ ಪರಿಶ್ರಮವೇ ಕಾರಣ
ಎಂದು ವರದಿಯಲ್ಲಿ ತಿಳಿಸಲಾಗಿದ್ದು, ಈ ಎಲ್ಲಾ ಅಂಶಗಳನ್ನೊಳಗೊಂಡ 100ಕ್ಕೂ ಹೆಚ್ಚು ಪುಟಗಳ
ವರದಿಯೊಂದಿಗೆ ದಿನಾಂಕ: 06-09-2023ರಂದು 7ನೇ ರಾಜ್ಯ ವೇತನ ಆಯೋಗದೊಂದಿಗೆ
ಚರ್ಚಿಸಲಾಯಿತು.

ಪ್ರಮುಖ ಅಂಶಗಳು :-

1) ರಾಜ್ಯದ ಶಿಕ್ಷಕರ ಕಾರ್ಯಭಾರ ಗುರುತಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಲಿ ಪಡೆಯುತ್ತಿರುವ
ವೇತನ ಶ್ರೇಣಿ 25800-51400ನ್ನು ದ್ವಿಗುಣಗೊಳಿಸಿ 51600-102800ರೂ, ಆರಂಭಿಕ
ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕಾಗಿ ವಿನಂತಿ, ಆದರೆ ಅದರಂತೆ ವೇತನ
ಶ್ರೇಣಿಯು ಹಾಲಿ ನೀಡುವ ವೇತನ ಶ್ರೇಣಿಯ ಬದಲಾಗಿ ಡಿಪ್ಲೋಮಾ ಪದವೀಧರರಿಗೆ
ನೀಡುವ ವೇತನ ಶ್ರೇಣಿಗೆ ಸಮಾನವಾಗಿ ಶಿಫಾರಸ್ಸು ಮಾಡುವುದು.

a) ಮೇಲ್ಕಂಡ ರೀತಿ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ನೀಡುವ ಕಾಲಮಿತಿ ಬಡ್ತಿ
ವೇತನ ಶ್ರೇಣಿಯನ್ನು ದ್ವಿಗುಣಗೊಳಿಸಿ 55300-105300ರ ಪ್ರತ್ಯೇಕ ವೇತನ ಶ್ರೇಣಿ
ನಿಗದಿಗೊಳಿಸಬೇಕಾಗಿ ವಿನಂತಿ.

b) ಮೇಲ್ಕಂಡ ರೀತಿ 15 ವರ್ಷ ಸೇವೆ ಸಲ್ಲಿಸಿದ ಸ್ವಯಂ ಚಾಲಿತ ಬಡ್ತಿ ವೇತನ ಶ್ರೇಣಿ 30350-58250ನ್ನು ದ್ವಿಗುಣಗೊಳಿಸಿ 60700-116500ರೂ. ಪ್ರತ್ಯೇಕ ವೇತನ ಶ್ರೇಣಿ
ನಿಗದಿಗೊಳಿಸಬೇಕಾಗಿ ವಿನಂತಿ.

c) ಪದವೀಧರ ಶಿಕ್ಷಕರು ಹಾಲಿ ಪಡೆಯುತ್ತಿರುವ ವೇತನ ಶ್ರೇಣಿ 27650-52650ನ್ನು
ದ್ವಿಗುಣಗೊಳಿಸಿ,
ಪ್ರತ್ಯೇಕ ವೇತನ
55300-105300ರೂ.
ಶ್ರೇಣಿ ನಿಗದಿಗೊಳಿಸಬೇಕಾಗಿ ವಿನಂತಿ

2) 5ನೇಯ ವೇತನ ಆಯೋಗದ ಮಾದರಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ,
ಮುಖ್ಯೋಪಾಧ್ಯಾಯರುಗಳಿಗೆ ಹೆಚ್ಚಿನ ವೇತನ ಶ್ರೇಣಿ ನೀಡಲು ಪರಿಗಣಿಸದೇ ಇದ್ದಲ್ಲಿ ಇತರೆ
ಸರ್ಕಾರಿ ನೌಕರರಿಗೆ ನೀಡುವ ವೇತನ ಹೆಚ್ಚಳಕ್ಕಿಂತ ಶೇಕಡ 20%ರಷ್ಟು ವಿಶೇಷ ವೇತನ
ನೀಡುವಂತೆ ಶಿಫಾರಸ್ಸು ಮಾಡಬೇಕಾಗಿ ವಿನಂತಿ.

3) ಹುದ್ದೆ ಇದ್ದು ಪ್ರತ್ಯೇಕ ವೇತನ ಶ್ರೇಣಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರುಗಳಿಗೆ
ಇರುವುದಿಲ್ಲ. ಇದನ್ನು ಗಮನಿಸಿ, ಕೇರಳ ರಾಜ್ಯದ ಮಾದರಿಯಲ್ಲಿ ಮುಖ್ಯೋಪಾಧ್ಯಾಯರ
ಹುದ್ದೆಗಳನ್ನು ಸೃಜಿಸುವುದರ ಜೊತೆಗೆ 15 ವರ್ಷದ ಸ್ವಯಂ ಚಾಲಿತ ಬಡ್ತಿ ವೇತನ ಶ್ರೇಣಿ
ನಂತರ ಇರುವ ವೇತನ ಶ್ರೇಣಿಗಳನ್ನು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ
ಸೃಜಿಸಿ ಶಿಫಾರಸ್ಸು ಮಾಡಬೇಕಾಗಿ ವಿನಂತಿ.

4) ವೇತನ ಶ್ರೇಣಿಗಳನ್ನು ನಿಗಧಿಗೊಳಿಸುವಾಗ ಸೇವಾ ಹಿರಿತನದ ಆಧಾರದ ಮೇಲೆ (Service
Weightage) ನೀಡಿ ವೇತನ ಶ್ರೇಣಿಗಳನ್ನು ನಿಗಧಿಗೊಳಿಸಿ ವೇತನ ಬಡ್ತಿಗಳನ್ನು ನೀಡುವಂತೆ
ಶಿಫಾರಸ್ಸು ಮಾಡಬೇಕಾಗಿ ವಿನಂತಿ.

5) ವಾರ್ಷಿಕ ಬಡ್ತಿಗಳನ್ನು (Rate of increaments) ನೀಡುವಾಗ ಮೂಲ ವೇತನಕ್ಕೆ
ಅನುಗುಣವಾಗಿ ಶೇಕಡ 5% ರಷ್ಟು ಪ್ರಮಾಣದಲ್ಲಿ ವಾರ್ಷಿಕ ವೇತನ ಬಡ್ತಿ ದರಗಳನ್ನು
ನಿಗದಿಗೊಳಿಸುವಂತೆ ಶಿಫಾರಸ್ಸು ಮಾಡಬೇಕಾಗಿ ವಿನಂತಿ.

6) ಈಗಿರುವ ವೇತನ ಶ್ರೇಣಿಗಳ ವ್ಯವಸ್ಥೆಯಲ್ಲಿ ಕೂಡುವಿಕೆ (Bunching system) ಹೆಚ್ಚಿನ
ಪ್ರಮಾಣದಲ್ಲಿ ಇರುವುದರಿಂದ ನಿರೀಕ್ಷಿಸಿದ ಪ್ರಮಾಣದಷ್ಟು ವೇತನ ಹೆಚ್ಚಳವಾಗಿರುವುದಿಲ್ಲ.
ಕಾರಣ ಒಂದು ವೇತನ ಶ್ರೇಣಿಯಿಂದ ಮತ್ತೊಂದು ವೇತನ ಶ್ರೇಣಿಗೆ ಗರಿಷ್ಠ ಪ್ರಮಾಣವನ್ನು
ನಿಗದಿಗೊಳಿಸುವುದರ ಜೊತೆಗೆ ವೇತನ ಶ್ರೇಣಿಗಳನ್ನು ಸಂಪೂರ್ಣ ಪರಿಷ್ಕರಿಸಿ, ಪುನರ್ ರಚಿಸಿ
ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗಿ ವಿನಂತಿ.

ಉದಾಹರಣೆ:-

a) 1994 ರಿಂದ 1998 ರವರೆಗೆ ಸೇವೆಗೆ ಸೇರಿದವರ ವೇತನ ಶ್ರೇಣಿ ಒಂದೇ ಆಗಿದೆ.

b) 2005ರಿಂದ 2008ರವರೆಗೆ ಸೇವೆಗೆ ಸೇರಿದ ಶಿಕ್ಷಕರ ವೇತನ ಶ್ರೇಣಿ ಒಂದೇ ಆಗಿದೆ.

ಈ ಕುರಿತು ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸಲು “ಸೂಕ್ತ ಸೇವಾ ವೇಟೇಜ್”ನ್ನು ನೀಡಿ ಸೇವೆಯಲ್ಲಿ ಹಿರಿತನ ಹೊಂದಿದದವರಿಗೆ ಸೇವೆಗನುಸಾರ ನ್ಯಾಯ ಒದಗಿಸಬೇಕಾಗಿ ವಿನಂತಿ.

7) ಪ್ರತಿ 5 ವರ್ಷಕ್ಕೆ ಮುಂದಿನ ವೇತನ ಶ್ರೇಣಿಗೆ ಶಿಕ್ಷಕರಿಗೆ ಮುಂಬಡ್ತಿ ನೀಡುವ ಕುರಿತು. ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 156000 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವುದರಿಂದ, ಎಲ್ಲರಿಗೂ ಏಕಕಾಲಕ್ಕೆ ಬಡ್ತಿ ಸಿಗುವುದು ಕಷ್ಟ ಸಾಧ್ಯ. ಪ್ರತಿ 5 ವರ್ಷಕ್ಕೊಮ್ಮೆ ಮುಂದಿನ ಹಂತದ ವೇತನ
ಶ್ರೇಣಿಗೆ (ಸೂಪರ್ ಟೈಮ್ ಸೈಲ್ ಮಾದರಿಯಲ್ಲಿ ಅವರ ವೇತನವನ್ನು ನಿಗಧಿಗೊಳಿಸಿ
ವೇತನ ಮುಂಬಡ್ತಿ ನೀಡಬೇಕಾಗಿ ವಿನಂತಿ

8) ಮನೆ ಬಾಡಿಗೆ ಭತ್ಯೆ ಈಗಿರುವ ವ್ಯವಸ್ಥೆಯಲ್ಲಿ ಶೇಕಡಾ 8ರಷ್ಟು ಇದ್ದು, ಮನೆ ಬಾಡಿಗೆ ಭತ್ಯೆ
ಶೇಕಡ 16ಕ್ಕೆ, ಶೇಕಡಾ 24 ರಷ್ಟಿರುವ ಮನೆ ಬಾಡಿಗೆ ಭತ್ಯೆಯನ್ನು ಶೇಕಡಾ 16ಕ್ಕೆ ಶೇಕಡಾ 25ರಷ್ಟಿರುವ ಮನೆ ಬಾಡಿಗೆ ಭತ್ಯೆಯನ್ನು ಶೇಕಡಾ 35ಕ್ಕೆ ಹೆಚ್ಚಿಸಲು ಶಿಫಾರಸ್ಸು ಮಾಡಬೇಕಾಗಿ
ವಿನಂತಿ.

9) ಕನಿಷ್ಠ ವೇತನ 36000 ರೂ.ಹಾಗೂ ಗರಿಷ್ಠ ವೇತನ 310000ರೂ. ನಿಗಧಿಗೊಳಿಸಬೇಕಾಗಿ ವಿನಂತಿ.

10) ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ವಿಷಯ ಪರಿವೀಕ್ಷಕ, ಶಿಕ್ಷಣಾಧಿಕಾರಿ, ಉಪನಿರ್ದೇಶಕರ ಹುದ್ದೆಯ ವರೆಗೆ ಬಡ್ತಿ ನೀಡುವಂತೆ ಶಿಫಾರಸ್ಸು
ಮಾಡಬೇಕಾಗಿ ವಿನಂತಿ
ವಿದ್ಯಾರ್ಹತೆಯ ಆಧಾರದ ಮೇಲೆಯೂ ಸಹ ಉಪನಿರ್ದೇಶಕರ
ಹುದ್ದೆಯ ವರೆಗೆ ಬಡ್ತಿ ನೀಡುವಂತೆ ಶಿಫಾರಸ್ಸು ಮಾಡಬೇಕಾಗಿ ವಿನಂತಿ.

11) ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಸೇವೆಗೆ ಸೇರಿದ ಮೇಲೆ, ಬಡ್ತಿಯನ್ನು ಹೊಂದಿದ
ಮೇಲೆ ಅವರಿಗೆ ಅವರ ನಿರಂತರ ಸೇವೆಯನ್ನು ಪರಿಗಣಿಸಿ 15, 20, 25 ವರ್ಷದ
ಬಡ್ತಿಗಳನ್ನು ನ್ಯಾಯಯುತವಾಗಿ ನೀಡಬೇಕು. ಆದರೆ ಈ ರೀತಿ ಬಡ್ತಿಗಳನ್ನು ನೀಡದೇ
ಇರುವುದರಿಂದ ಬಡ್ತಿ ಹೊಂದಿದ ಮುಖ್ಯಗುರುಗಳಿಗೆ ಹಾಗೂ ಪ್ರಾಥಮಿಕ ಶಾಲೆಯಿಂದ ಪ್ರೌಢ
ಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಮುಂದಿನ ಹಂತಕ್ಕೆ ಬಡ್ತಿ ಹೊಂದಿದ ಶಿಕ್ಷಕರು
ತಮಗಿಂತ ಸೇವೆಯಲ್ಲಿ ಕಡಿಮೆ ಸೇವೆ ಸಲ್ಲಿಸಿದ ನೌಕರರಿಗಿಂತ ಕಡಿಮೆ ವೇತನವನ್ನು
ಪಡೆಯುತ್ತಿದ್ದಾರೆ. ಕಾರಣ ಸದರಿ ವಿಷಯವನ್ನು 6ನೇ ವೇತನ ಆಯೋಗದಲ್ಲಿ ಶಿಫಾರಸ್ಸು
ಮಾಡಿದ್ದರೂ ಕೂಡ ಇದನ್ನು ಜಾರಿಗೊಳಿಸದೇ ಬಡ್ತಿ ಹೊಂದಿದ ಶಿಕ್ಷಕರಿಗೆ
ಅನ್ಯಾಯವಾಗುತ್ತಿದ್ದು, ಕಾರಣ ಮಾನ್ಯರವರು ಇದನ್ನು ಅತ್ಯಂತ ನ್ಯಾಯಯುತವಾಗಿ ಗಮನಿಸಿ
ಬಡ್ತಿ ಹೊಂದಿದ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಹಾಗೂ
ನಿರಂತರ ಸೇವೆಯನ್ನು ಪರಿಗಣಿಸಿ ವೇತನ ಬಡ್ತಿಗಳನ್ನು ನೀಡಬೇಕೆಂದು ಅವರ
ಒತ್ತಾಯಿಸುತ್ತೇವೆ.

12) ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ಸೌಲಭ್ಯ ಘೋಷಿಸಿದ್ದು, ಸದರಿ
ಯೋಜನೆಯ ಆದೇಶದಲ್ಲಿ ಆಯಾ ವೃಂದದ ಕನಿಷ್ಠ ಮೂಲ ವೇತನದ ಪ್ರತಿಶತ 1 ರಷ್ಟು
ಮೊತ್ತವನ್ನು ಕಡಿತಗೊಳಿಸಿ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದ್ದು, ಸದರಿ
ಆದೇಶವನ್ನು ಕೈಬಿಟ್ಟು ಪೋಲಿಸ್ ಇಲಾಖೆಯ ಆರೋಗ್ಯ ಭಾಗ್ಯ ಮಾದರಿಯಲ್ಲಿ ಉಚಿತವಾಗಿ
ಸಂಪೂರ್ಣ “ನಗದು ರಹಿತ” (Completely Cashless Treatment) ಯೋಜನೆ
ಜಾರಿ ಮಾಡಬೇಕು.

13) ವಾರದಲ್ಲಿ 5 ದಿವಸ ಕಾರ್ಯ ನಿರ್ವಹಿಸುವ ಶಾಲಾ ಆಡಳಿತ ವ್ಯವಸ್ಥೆ ಬೇರೆ ರಾಜ್ಯದಲ್ಲಿದ್ದು,
ಅದೇ ಮಾದರಿಯಲ್ಲಿ ವಾರದಲ್ಲಿ 5 ದಿವಸಗಳು ಮಾತ್ರ ಶಾಲೆಗಳು ಕಾರ್ಯನಿರ್ವಹಿಸುವಂತೆ
ಶಿಫಾರಸ್ಸು ಮಾಡಬೇಕಾಗಿ ವಿನಂತಿ.

14) ಪ್ರತಿ ಸರ್ಕಾರಿ ಶಾಲೆಗೆ ಒಬ್ಬ ಮುಖ್ಯೋಪಾಧ್ಯಾಯ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕ
ನೇಮಕಾತಿಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗಿ ವಿನಂತಿ.

15) ಈಗಾಗಲೇ ಕೆಲವು ಸರ್ಕಾರಿ ಶಾಲೆಗಳಲ್ಲಿ LKG, UKG ಆರಂಭವಾಗಿದ್ದು, ಉಳಿದ ಎಲ್ಲಾ
ಸರ್ಕಾರಿ ಶಾಲೆಗಳಲ್ಲಿ LKG, UKG ಪ್ರಾರಂಭಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗಿ
ವಿನಂತಿ.

16) ಎಲ್ಲಾ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ/ ಶಾರೀರಿಕ ಶಿಕ್ಷಣವನ್ನು
ಕಡ್ಡಾಯಗೊಳಿಸಿರುವುದರಿಂದ ರಾಜ್ಯದ ಎಲ್ಲಾ ಶಾಲೆಗಳಿಗೆ ದೈಹಿಕ ಶಿಕ್ಷಕರನ್ನು ನೇಮಕ
ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗಿ ವಿನಂತಿ, ದೈಹಿಕ ಮತ್ತು ಉರ್ದು ಶಾಲಾ
ಶಿಕ್ಷಕರುಗಳಿಗೆ ಉನ್ನತ ಮಟ್ಟದ ಮುಂಬಡ್ತಿ ನೀಡುವಂತೆ ಶಿಪಾರಸ್ಸು ಮಾಡಬೇಕಾಗಿ ವಿನಂತಿ.

17) ಪ್ರಾಥಮಿಕ ಶಾಲೆಯಲ್ಲಿ ಒಂದೇ ರೀತಿಯ ಆಡಳಿತ ವ್ಯವಸ್ಥೆ, ಬೋಧನಾ ವ್ಯವಸ್ಥೆ, ಪಠ್ಯವಸ್ತು,
ಪಠ್ಯಕ್ರಮ ಒಂದೇ ಆಗಿದ್ದು, ಪ್ರತ್ಯೇಕ ವೇತನ ಶ್ರೇಣಿಗಳನ್ನು ನಿಗಧಿಗೊಳಿಸುವುದರಿಂದ ಶಾಲಾ
ಆಡಳಿತ ವ್ಯವಸ್ಥೆಯಲ್ಲಿ ತೊಂದರೆಯಾಗುತ್ತದೆ. ಆದ್ದರಿಂದ ಪ್ರಾಥಮಿಕ ಶಾಲಾ ವೃಂದದಲ್ಲಿ
ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರಿಗೆ ಯಾವುದೇ ಭೇದ-ಭಾವ ಮಾಡದೇ
ಉನ್ನತವಾದ ಏಕರೂಪದ ವೇತನ ಶ್ರೇಣಿಯನ್ನು ನಿಗಧಿಗೊಳಿಸಬೇಕಾಗಿ ವಿನಂತಿ

18) ರಾಜ್ಯದಲ್ಲಿ ಹೊಸದಾಗಿ ವೃಂದ ಬದಲಾವಣೆಗಳನ್ನು ಮಾಡಿ ಹಾಲಿ ಕಾರ್ಯ
ನಿರ್ವಹಿಸುತ್ತಿರುವ ಶಿಕ್ಷಕರಿಗೆ ಒಂದು ರೀತಿಯ ವೇತನ ಶ್ರೇಣಿ, ಪದವಿ ಆಧಾರದ ಮೇಲೆ
ಇನ್ನೊಂದು ವೇತನ ಶ್ರೇಣಿ ನಿಗಧಿಗೊಳಿಸುವುದು ಪ್ರಾಥಮಿಕ ಶಾಲಾ ಆಡಳಿತ ದೃಷ್ಠಿಯಿಂದ
ಸಮಂಜಸವಲ್ಲ. ಕಾರಣ ಪ್ರಾಥಮಿಕ ಶಾಲಾ ವೃಂದದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ
ಶಿಕ್ಷಕರಿಗೆ ಉನ್ನತವಾದ ವೇತನವನ್ನು ನಿಗಧಿಗೊಳಿಸಬೇಕಾಗಿ ವಿನಂತಿ

19) ಕರ್ನಾಟಕ ರಾಜ್ಯದಲ್ಲಿ 3 ರೀತಿಯ ಶಾಲಾ ಆಡಳಿತ ವ್ಯವಸ್ಥೆ ಇದ್ದು,

  1. ಕಿರಿಯ ಪ್ರಾಥಮಿಕ ಶಾಲೆಗಳು
  2. ಹಿರಿಯ ಪ್ರಾಥಮಿಕ ಶಾಲೆಗಳು (250ಕ್ಕಿಂತ ಕಡಿಮೆ ಮಕ್ಕಳಿರುವ)
  3. ಪದವಿಧರೇತರ ಮಾದರಿ ಪ್ರಾಥಮಿಕ ಶಾಲೆಗಳು (250ಕ್ಕಿಂತ ಹೆಚ್ಚು ಮಕ್ಕಳಿರುವ)
    ಕೇರಳ ಸರ್ಕಾರ ಇದೇ ರೀತಿಯಾದ ಹಂತದಲ್ಲಿ ಆಡಳಿತ ವ್ಯವಸ್ಥೆಯನ್ನು
    ಹೊಂದಿದ್ದು, ಅ ಮಾದರಿಯಲ್ಲಿ ರಾಜ್ಯದ ಹಂತದ ಎಲ್ಲಾ ಶಾಲೆಗಳಿಗೆ
    ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ಮಂಜೂರು ಮಾಡುವುದರೊಂದಿಗೆ ಕೇರಳ ಸರ್ಕಾರದ
    ಮಾದರಿಯಲ್ಲಿ ಪ್ರತ್ಯೇಕವಾದ ವೇತನ ಶ್ರೇಣಿಗಳನ್ನು ನಿಗಧಿಗೊಳಿಸುವಂತೆ ಶಿಫಾರಸ್ಸು
    ಮಾಡಬೇಕಾಗಿ ವಿನಂತಿ.

20)ದೇಶಾದ್ಯಂತ ಒಂದೇ ರೀತಿಯ ಸೇವಾ ತೆರಿಗೆ (Goods and Service Tax) ವ್ಯವಸ್ಥೆ
ಇದ್ದು, ವೇತನ ವ್ಯವಸ್ಥೆಯಲ್ಲಿಯೂ ಸಹ ಒಂದೇ ರೀತಿ ಇರುವಂತೆ ಅಂದರೆ ಕೇಂದ್ರ
ಸರ್ಕಾರಕ್ಕಿಂತ ಉನ್ನತವಾದ ವೇತನ ಶ್ರೇಣಿ ವ್ಯವಸ್ಥೆ ಇರುವಂತೆ ಸರ್ಕಾರಕ್ಕೆ ಶಿಫಾರಸ್ಸು
ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇವೆ. (one nation one tax, one pension,
one salary system)

21) ಕೇರಳ ಸರ್ಕಾರ ಮೂಲ ವೇತನದ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಪಿಟ್‌ಮೆಂಟ್‌ನ್ನು ನೀಡಿ ವಿಲೀನಗೊಳಿಸಿ, ಹೊಸ ವೇತನ ಶ್ರೇಣಿಗಳನ್ನು ಸೃಷ್ಟಿಗೊಳಿಸಿ ವೇತನ ನಿಗದಿಗೊಳಿಸಿದೆ. ಹೆಚ್ಚಿನ
ಪಿಟ್‌ಮೆಂಟ್‌ ನೀಡಿದ್ದರಿಂದ ಮೂಲ ವೇತನ ಹೆಚ್ಚಳವಾಗಿದೆ. ಈ ಮೂಲ ವೇತನದಲ್ಲಿ
ಇಂದಿನ ತುಟ್ಟಿಭತ್ಯೆಯನ್ನು ಮುಂದುವರೆಸಿಕೊಂಡು ಹೋಗಿದ್ದರಿಂದ ವೇತನದ ಪ್ರಮಾಣದಲ್ಲಿ
ಹೆಚ್ಚಳವಾಗಿದೆ. ಮಾನ್ಯರವರು ಈ ಕುರಿತು ಪರಿಶೀಲಿಸಿ ಶಿಕ್ಷಕರುಗಳಿಗೆ ಹೆಚ್ಚಿನ ವೇತನ
ಪ್ರಮಾಣವನ್ನು ನಿಗದಿಗೊಳಿಸಬೇಕಾಗಿ ವಿನಂತಿ.

22) ಸರ್ಕಾರಿ ಶಾಲೆಗಳಲ್ಲಿ ಗಣಕೀಕರಣ ಕೆಲಸ ಹಾಗೂ ಇಲಾಖೆಗೆ ಮಾಹಿತಿಯನ್ನು ಒದಗಿಸುವ
ಕಾರ್ಯ ಹೆಚ್ಚು ಇರುವುದರಿಂದ ರಾಜ್ಯದ ಪ್ರತಿ ಸರ್ಕಾರಿ ಶಾಲೆಗಳಿಗೆ ಒಬ್ಬ “ಶಾಲಾ
ಸೇವಕರೆಂದು” (ದಿನಗೂಲಿ) ಆಧಾರದ ಮೇಲೆ ತೆಗೆದುಕೊಳ್ಳಲು ಮುಖ್ಯ ಗುರುಗಳಿಗೆ
ಅಧಿಕಾರ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗಿ ವಿನಂತಿ.

23)ರಾಜ್ಯದ ಪ್ರತಿ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್‌ಗಳನ್ನು ಹಾಗೂ ಗಣಕಯಂತ್ರಗಳನ್ನು
ಒದಗಿಸುವ ಮೂಲಕ ರಾಜ್ಯದ ಎಲ್ಲಾ ಶಾಲೆಗಳನ್ನು ಡಿಜಿಟಲ್ ಶಾಲೆಗಳಾಗಿ
ಪರಿವರ್ತಿಸಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಾಗಿ ವಿನಂತಿ.

24)ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳ ಪ್ರಕಾರ 150ಕ್ಕಿಂತ ಹೆಚ್ಚು ಮಕ್ಕಳಿರುವ ಕಿರಿಯ
ಪ್ರಾಥಮಿಕ ಶಾಲೆಗಳಿಗೆ ಮಕ್ಕಳು ಶಿಕ್ಷಕರ ಅನುಪಾತ (M) (Pupil Teachers Ratio) ಪರಿಗಣಿಸದೇ ಮುಖ್ಯ ಗುರುಗಳ ಹುದ್ದೆಯನ್ನು ಮಂಜೂರು ಮಾಡುವ ಅವಕಾಶವಿದ್ದು, ಸದರಿ ನಿಯಮದಂತೆ ಕ್ರಮಕೈಗೊಳ್ಳಲು ಶಿಫಾರಸ್ಸು ಮಾಡಬೇಕಾಗಿ ವಿನಂತಿ.

25)1 ರಿಂದ 8ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ
1 ರಿಂದ 5ನೇ ತರಗತಿಯಲ್ಲಿ 150ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ 1 ಮುಖ್ಯ ಗುರುಗಳ ಹುದ್ದೆ
ಹಾಗೂ 6 ರಿಂದ 8ನೇ ತರಗತಿಯಲ್ಲಿ 100ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಅದೇ ಶಾಲೆಗೆ
ಇನ್ನೊಂದು ಮುಖ್ಯ ಗುರುಗಳ ಹುದ್ದೆ ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಬೇಕಾಗಿ
ವಿನಂತಿ.

26) ಕರ್ನಾಟಕ ರಾಜ್ಯದಲ್ಲಿ NPS ಯೋಜನೆಗೆ ಒಳಪಡುವ ಲಕ್ಷಾಂತರ ನೌಕರರು/ಶಿಕ್ಷಕರು
ಕಾರ್ಯನಿರ್ವಹಿಸುತ್ತಿದ್ದು, ಸದರಿ ನೌಕರರನ್ನು OPS ಯೋಜನೆಗೆ ಒಳಪಡಿಸಬೇಕೆಂದು
ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸುತ್ತೇವೆ.

27)2024-2025 ಸರ್ಕಾರದ 8ನೇಯ ವೇತನ ಆಯೋಗ ರಚನೆಯಾಗಿ ವರದಿ
ಕೊಡುವ ಸಂಭವವಿದೆ, ಕಾರಣ ಮಾನ್ಯರವರು ಈ ಅಂಶ ಪರಿಗಣಿಸಿ ರಾಜ್ಯದ ಪ್ರಾಥಮಿಕ
ಶಾಲಾ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸಿ ಶಿಫಾರಸ್ಸು
ಮಾಡಬೇಕಾಗಿ ವಿನಂತಿ.

28)6ನೇ ವೇತನ ಆಯೋಗದ ಸೌಲಭ್ಯಗಳು ದಿನಾಂಕ: 01-07-2017ರಿಂದ Notional ಆಗಿ ಜಾರಿಯಾಗಿದ್ದು, ದಿನಾಂಕ: 01-07-2022ಕ್ಕೆ 5 ವರ್ಷವಾಗುತ್ತಿರುವುದರಿಂದ 7ನೇ ವೇತನ
ಆಯೋಗ ಸೌಲಭ್ಯಗಳನ್ನು ದಿನಾಂಕ: 01-07-2022ರಿಂದಲೇ ಜಾರಿಗೊಳಿಸಬೇಕೆಂದು
Notional ಆಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಲಾಯಿತು.

29) ಗ್ರಾಮೀಣ ಭತ್ಯೆ, SFN, ತರಬೇತಿ ಭತ್ಯೆ ಗಳಿಕೆ ರಜೆ ಹೆಚ್ಚು ಮಾಡುವ ಕುರಿತು ಸಾಂದರ್ಭಿಕ
ರಜೆಗಳನ್ನು ಹೆಚ್ಚು ಮಾಡುವಂತೆ ಶಿಫಾರಸ್ಸು ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ
ಕೆ.ನಾಗೇಶ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಚಂದ್ರಶೇಖರ ನುಗ್ಗಲಿ, ಸಂಘಟನಾ
ಕಾರ್ಯದರ್ಶಿಯಾದ ಶ್ರೀಮತಿ ಪ್ರಮೀಳಾ.ಟಿ.ಕಾಮನಳ್ಳಿ, ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಬಸವರಾಜ ಬಾಗೇನವರ್, ಕಾರ್ಯದರ್ಶಿಯಾದ ಗೌಸಮೋಹಿದ್ದೀನ ಮುಲ್ಲಾ, ಮೈಸೂರು ಜಿಲ್ಲಾಧ್ಯಕ್ಷರಾದ
ಸೋಮೇಗೌಡ, ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಮಾರುತೇಶ್.ಆರ್. ಬೆಳಗಾವಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ
ಜಯಕುಮಾರ.ಆರ್.ಹೆಬಳಿ, ರವಿ.ವಿ.ಗೋಣಿ, ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಸಿದ್ರಾಮ.ಮ.ಲೋಕನ್ನವರ,
ಗದಗ ಜಿಲ್ಲಾಧ್ಯಕ್ಷರಾದ ವಿ.ಎಂ.ಹಿರೇಮಠ ರವರು, ಕಾರ್ಯದರ್ಶಿ ಮಹೇಶ್.ಎನ್.ಕುರಿಯವರ
ವಿಜಯಪುರ ಜಿಲ್ಲಾಧ್ಯಕ್ಷರಾದ ಜಿ.ಎಸ್.ಬೇವನೂರು, ಕಾರ್ಯದರ್ಶಿಯಾದ ಅರ್ಜುನ.ಜಿ.ಲಮಾಣಿ,
ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಗಿರೀಶ್‌, ಕೋಲಾರ ಜಿಲ್ಲಾಧ್ಯಕ್ಷರಾದ ಅಪ್ಪಯ್ಯಗೌಡ,
ಕಾರ್ಯದರ್ಶಿಯಾದ ನಾಗರಾಜು, ಮಂಡ್ಯ ಜಿಲ್ಲಾ ಅಧ್ಯಕ್ಷರಾದ ಜೆ.ವಾಯ್.ಮಂಜುನಾಥ್, ಚಿಕ್ಕಬಳ್ಳಾಪುರ
ಜಿಲ್ಲಾಧ್ಯಕ್ಷರಾದ ನಾರಾಯಣಸ್ವಾಮಿ, ಕಾರ್ಯದರ್ಶಿ ಅಶೋಕ.ಆರ್. ತುಮಕೂರು ಜಿಲ್ಲಾಧ್ಯಕ್ಷರಾದ
ಪರಶಿವಮೂರ್ತಿ, ಕಾರ್ಯದರ್ಶಿಯಾದ ಚಿಕ್ಕಣ್ಣ, ಹಾವೇರಿ ಜಿಲ್ಲಾಧ್ಯಕ್ಷರಾದ ಬಸನಗೌಡ ಪಂಚಪ್ಪ ಬಿದರಿ,
ಕಾರ್ಯದರ್ಶಿ ವಿಜಯೇಂದ್ರ ಯತ್ನಳ್ಳಿ, ಬಳ್ಳಾರಿ ಜಿಲ್ಲಾಧ್ಯಕ್ಷರಾದ ಸಿ.ನಿಂಗಪ್ಪ, ಧಾರವಾಡ ಜಿಲ್ಲಾಧ್ಯಕ್ಷರಾದ
ವಿ.ಎಫ್.ಚುಳಕಿ, ಬಣವಿ, ಜಂಗಳಿ ಹಾಗೂ ಕಲಬುರ್ಗಿ ಜಿಲ್ಲೆಯ ಕಾರ್ಯದರ್ಶಿಯಾದ ಬಾಬು ಮೌರ್ಯ,
ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಬೈರೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Sharing Is Caring:

Leave a Comment