ಯೋಗಾಸನಗಳುನಿಂತಿರುವ ಭಂಗಿಗಳು /ಆಸನಗಳು
1.ತಾಡಾಸನ
- ತಾಡಾಸನ
ತಾಡ ಎಂದರೆ ತಾಳೆ ಮರ ಅಥವಾ
ಪರ್ವತ. ಈ ಆಸನವು ಸ್ಥಿರತೆ ಮತ್ತು
ಧೃಡತೆಯನ್ನು ಸಾಧಿಸಲು
ಸಹಕರಿಸುತ್ತದೆ ಮತ್ತು ನಿಂತಿರುವ
ಎಲ್ಲಾ ಆಸನಗಳಿಗೆ ಆಧಾರ/ಮೂಲ
ಆಸನವಾಗಿದೆ.
ದೃಡತೆಯನ್ನು ಸಾಧಿ ಸಲು
ಸಹಕರಿಸುತ್ತದೆ ಮತ್ತು ನಿಂತಿರುವ
ಎಲ್ಲಾ ಆಸನಗಳಿಗೆ ಆಧಾರ/ಮೂಲ
ಆಸನವಾಗಿದೆ.
ಪ್ರಯೋಜನಗಳು
ಈ ಆಸನವು ದೇಹದ ಸ್ಥಿರತೆಯನ್ನು
ಕಾಪಾಡಲು, ಬೆನ್ನು ಹುರಿಯ
ನಗರಗಳ ಸಮಸ್ಯೆಯನ್ನು
ನಿವಾರಿಸಲು ಸಹಾಯ ಮಾಡುತ್ತದೆ.
2.ವೃಕ್ಷಾಸನ
- ವೃಕ್ಷಾಸನ
ವೃಕ್ಷ ಎಂದರೆ ಮರ. ಈ ಆಸನದ ಅಂತಿಮ
ಸ್ಥಿತಿಯು ಮರದ ಆಕಾರವನ್ನು
ಹೋಲುವುದರಿಂದ ಈ ಆಸನಕ್ಕೆ
ವೃಕ್ಷಾಸನ ಎಂದು ಹೆಸರು.
ಪ್ರಯೋಜನಗಳು
ನರ-ಸ್ನಾಯುಗಳ ಸಮನ್ವಯತೆ,
ಸಮತೋಲನ, ಸಹಿಷ್ಣುತೆ,
ಜಾಗರೂಕತೆ ಮತ್ತು
ಏಕಾಗ್ರತೆಯನ್ನು ಹೆಚ್ಚಿಸಲು
ಸಹಾಯ ಮಾಡುತ್ತದೆ.
3.ಪಾದಹಸ್ತಾಸನ
- ಪಾದಹಸ್ತಾಸನ
ಪಾದಹಸ್ತಾಸನ ಎಂದರೆ
ಅಂಗೈಗಳನ್ನು ಕಾಲುಗಳ
ಕೆಳಗೆ ಇಡುವುದು.
ಪ್ರಯೋಜನಗಳು
ಈ ಆಸನವು
ಜೀರ್ಣಕ್ರಿಯೆಯನ್ನು
ಸುಧಾರಿಸುತ್ತದೆ
ಬೆನ್ನುನೋವು ಮತ್ತು
ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುತ್ತದೆ.
4.ಅರ್ಧ ಚಕ್ರಾಸನ
- ಅರ್ಧ ಚಕ್ರಾಸನ
ಅರ್ಧ ಚಕ್ರಾಸನ ಎಂದರೆ ಎರಡು ಕಾಲುಗಳ ನಡುವೆ
2 ಇಂಚು ಅಂತರದಲ್ಲಿ ನಿಂತುಕೊಳ್ಳಬೇಕು.
ಪ್ರಯೋಜನಗಳು
ಈ ಆಸನವು ಬೆನ್ನಿನ ಮೂಳೆ, ನರ ಮತ್ತು
ಸ್ನಾಯುಗಳನ್ನು ಬಲಪಡಿಸುತ್ತದೆ. ಸ್ಪಾಂಡಿಲೈಸಿಸ್
ಸಮಸ್ಯೆಯ ನಿರ್ವಹಣೆಗೆ ಸಹಾಯಕಾರಿ.
5.ತ್ರಿಕೋನಾಸನ
- ತ್ರಿಕೋನಾಸನ
ಈ ಆಸನವು
ದೇಹ. ತೋಳುಗಳು ಮತ್ತು
ಉಂಟಾದ ತ್ರಿಕೋನವನ್ನು
ಕಾಲುಗಳಿಂದ
ಹೋಲುವುದರಿಂದ ತ್ರಿಕೋನಾಸನ ಎಂಬ ಹೆಸರು
ಬಂದಿದೆ.
ಪ್ರಯೋಜನಗಳು
ಈ ಆಸನವು ಬೆನ್ನುಮೂಳೆಯನ್ನು ಬಲಪಡಿಸುತ್ತದೆ.
ತೊಡೆ ಮತ್ತು ಸೊಂಟದ
ಮೀನಖಂಡ,
ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಶ್ವಾಸಕೋಶದ
ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಕುಳಿತುಕೊಂಡು ಮಾಡುವ
ಭಂಗಿಗಳು /ಆಸನಗಳು
1.ಭದ್ರಾಸನ
- ಭದ್ರಾಸನ
ನೇರವಾಗಿ
ಭದ್ರ ಎಂದರೆ ದೃಢ ಅಥವಾ ಶುಭ, ಎರಡೂ
ಕಾಲುಗಳನ್ನು ಮುಂದಕ್ಕೆ ಚಾಚಿ
ಕುಳಿತುಕೊಳ್ಳಬೇಕು ಬೆನ್ನಿನ ಭಾರವನ್ನು ಎರಡೂ ಕೈಗಳ
ಮೇಲೆ ಬಿಡಬೇಕು. ದೇಹವು ಸಂಪೂರ್ಣವಾಗಿ
ವಿಶ್ರಾಂತ ಸ್ಥಿತಿಯಲ್ಲಿರಬೇಕು. ಇದು ವಿಶ್ರಾಮಾಸನ.
ಪ್ರಯೋಜನಗಳು
ಈ ಆಸನವು ದೇಹವನ್ನು ದೃಡವಾಗಿಡಲು ಸಹಾಯ
ಮಾಡುತ್ತದೆ ಮತ್ತು ಮನಸ್ಸನ್ನು ಸ್ಥಿರಗೊಳಿಸುತ್ತದೆ.
ಗರ್ಭಾವಸ್ಥೆಯಲ್ಲಿ ಸಹಕಾರಿಯಾಗಿದೆ ಮತ್ತು ಮುಟ್ಟಿನ
ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವನ್ನು
ನಿವಾರಿಸುತ್ತದೆ.
2.ವಜ್ರಾಸನ
- ವಜ್ರಾಸನ
ಕಾಲುಗಳನ್ನು ಜೊತೆಯಾಗಿ ಚಾಚಿ ಕುಳಿತುಕೊಳ್ಳಬೇಕು.
ಕೈಗಳು ದೇಹದ ಪಕ್ಕದಲ್ಲಿರಬೇಕು ಮತ್ತು ಅಂಗೈ ನೆಲದ
ಮೇಲಿರಬೇಕು.
ಪ್ರಯೋಜನಗಳು
ಈ ಆಸನವು ಜೀರ್ಣಕ್ರಿಯೆಯನ್ನು
ಸುಧಾರಿಸುತ್ತದೆ.
ತೊಡೆಯ ಮತ್ತು ಮೀನುಖಂಡಗಳ ಸ್ನಾಯುಗಳನ್ನು
ಬಲಪಡಿಸುತ್ತದೆ.
3.ಅರ್ಧಉಷ್ಟ್ರಾಸನ
- ಅರ್ಧಉಷ್ಟ್ರಾಸನ
ಉಷ್ಟ್ರ ಎಂದರೆ ಒಂಟೆ. ಈ ಆಸನದ ಕೊನೆಯ ಸ್ಥಿತಿಯು
ಒಂಟೆಯನ್ನು ಹೋಲುವುದರಿಂದ ಈ ಹೆಸರು.
ಪ್ರಯೋಜನಗಳು
ಈ ಆಸನವು ಬೆನ್ನು ಮತ್ತು ಕತ್ತಿನ ಸ್ನಾಯುಗಳನ್ನು
ಬಲಪಡಿಸುತ್ತದೆ. ಮಲಬದ್ಧತೆ ಮತ್ತು ಬೆನ್ನುನೋವನ್ನು
ನಿವಾರಿಸುತ್ತದೆ. ತಲೆ ಮತ್ತು ಹೃದಯ ಪ್ರದೇಶಕ್ಕೆ
ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ.
4.ಉಷ್ಟ್ರಾಸನ
- ಉಷ್ಟ್ರಾಸನ
ಉಷ್ಟ್ರ ಎಂದರೆ ಒಂಟೆ. ಈ ಆಸನದ ಕೊನೆಯ ಸ್ಥಿತಿಯು
ಒಂಟೆಯನ್ನು ಹೋಲುವುದರಿಂದ ಈ ಹೆಸರು.
ಪ್ರಯೋಜನಗಳು
ದೃಷ್ಟಿ ದೋಷ ನಿವಾರಣೆಗೆ ಉಷ್ಟ್ರಾಸನ ಅತ್ಯಂತ
ಉಪಯುಕ್ತವಾಗಿದೆ. ಬೆನ್ನು ಮತ್ತು ಕುತ್ತಿಗೆ ನೋವನ್ನು
ನಿವಾರಿಸಲು ಈ ಆಸನ ಉಪಯುಕ್ತವಾಗಿದೆ. ಈ
ಆಸನವು ಹೊಟ್ಟೆ ಮತ್ತು ಸೊಂಟದ ಸುತ್ತಲಿನ
ಕೊಬ್ಬನ್ನು ಕಡಿಮೆ ಮಾಡಲು ಸಹಾಯಕಾರಿ. ಜೀರ್ಣ
ಸ೦ಬ೦ಧಿ ತೊ೦ದರೆಗಳು, ಉಸಿರಾಟದ
ಖಾಯಿಲೆಗಳಲ್ಲಿ ಪ್ರಯೋಜನಕಾರಿ.
5.ಶಶಾಂಕಾಸನ
- ಶಶಾಂಕಾಸನ
ಶಶಾಂಕ ಎಂದರೆ ಮೊಲ. ಈ ಭಂಗಿಯಲ್ಲಿರುವ
ದೇಹವು ಮೊಲವನ್ನು ಹೋಲುವುದರಿಂದ ಈ
ಹೆಸರು.
ಪ್ರಯೋಜನಗಳು
ಈ ಆಸನವು ಒತ್ತಡ ಮತ್ತು ಆತಂಕವನ್ನು ಕಡಿಮೆ
ಮಾಡಲು ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು
ನಿವಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಮತ್ತು ಬೆನ್ನು ನೋವನ್ನು ನಿವಾರಿಸುತ್ತದೆ.
6.ಉತ್ಥಾನ ಮಂಡೂಕಾಸನ
- ಉತ್ಥಾನ ಮಂಡೂಕಾಸನ
ಈ ಆಸನದ ಅಂತಿಮ ಭಂಗಿ ನೇರವಾಗಿರುವ
ಕಪ್ಪೆಯನ್ನು ಹೋಲುವುದರಿಂದ ಈ ಹೆಸರು ಬಂದಿದೆ.
ಪ್ರಯೋಜನಗಳು
ಈ ಆಸನವು ಬೆನ್ನು ಮತ್ತು ಕುತ್ತಿಗೆ ನೋವಿಗೆ,
ವಿಶೇಷವಾಗಿ ಸ್ಟಾಂಡಿಲೋಸಿಸ್ನಲ್ಲಿ ಸಹಾಯಕಾರಿ.
ಎದೆ ಗೂಡಿನ ಚಲನೆಯನ್ನು ಹೆಚ್ಚಿನ ಶ್ವಾಸಕೋಶದ
ಸಾಮರ್ಥ್ಯವನ್ನು ಸುಧಾರಿಸುತ್ತದೆ.
7.ವಕ್ರಾಸನ
- ವಕ್ರಾಸನ
ವಕ್ರ ಎಂದರೆ ತಿರುಚು ಎಂದು ಅರ್ಥ. ಈ ಆಸನದಲ್ಲಿ,
ಬೆನ್ನುಹುರಿಯು ತಿರುಚುವುದರಿಂದ ಈ ಹೆಸರು.
ಪ್ರಯೋಜನಗಳು
ಬೆನ್ನು ಮೂಳೆಯ ಆಕುಂಚನವನ್ನು ಹೆಚ್ಚಿಸಲು
ಸಹಾಯ ಮಾಡುತ್ತದೆ. ಮೇದೋಜೀರಕ ಗ್ರಂಥಿಯ
ಕಾರ್ಯಗಳನ್ನು ಉತ್ತೇಜಿಸುತ್ತದೆ. ಮತ್ತು
ಮಧುಮೇಹವನ್ನು ನಿರ್ವಹಿಸಲು ಸಹಾಯ
ಮಾಡುತ್ತದೆ.
ಬೆನ್ನಿನ ಮೇಲೆ ಮಲಗಿ ಮಾಡುವ ಆಸನಗಳು
1.ಸೇತುಬಂಧಾಸನ
- ಸೇತುಬಂಧಾಸನ
ಸೇತುಬಂಧ ಎಂದರೆ ಸೇತುವೆಯ ರಚನೆ. ಈ
ಭಂಗಿಯಲ್ಲಿ ದೇಹವು ಸೇತುವಿನಂತೆ ಕಾಣುವುದರಿಂದ
ಇದನ್ನು ಸೇತುಬಂಧಾಸನ ಎಂದು ಕರೆಯುತ್ತಾರೆ.
ಇದನ್ನು ಚತುಷ್ಪಾದಾಸನ ಎಂದೂ ಕರೆಯುತ್ತಾರೆ.
ಪ್ರಯೋಜನಗಳು
ಮಾನಸಿಕ ಖಿನ್ನತೆ, ಆತಂಕವನ್ನು ನಿವಾರಿಸುತ್ತದೆ.
ಮತ್ತು ಬೆನ್ನಿನ ಭಾಗವನ್ನು ಬಲಪಡಿಸುತ್ತದೆ. ಜೀರ್ಣ
ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ಮಲಬದ್ಧತೆಯನ್ನು
ನಿವಾರಿಸುತ್ತದೆ.
2.ಉತ್ಥಾನಪಾದಾಸನ
- ಉತ್ಥಾನಪಾದಾಸನ
ಉತ್ಥಾನ ಎಂದರೆ ಮೇಲಕ್ಕೆ ಎತ್ತುವುದು ಮತ್ತು ಪಾದ
ಎಂದರೆ ಕಾಲುಗಳು. ಈ ಭಂಗಿಯಲ್ಲಿ ಕಾಲುಗಳನ್ನು
ಮೇಲಕ್ಕೆ ಎತ್ತಲಾಗುವುದು.
ಪ್ರಯೋಜನಗಳು
ನಾಭಿಯ ಬಣ್ಣ
ನಾಭಿಯ ಬಳಿ ಇರುವ ಮಣಿಪೂರ ಚಕ್ರವನ್ನು
ಸಮತೋಲನಕ್ಕೆ ತರುತ್ತದೆ. ಹೊಟ್ಟೆಯ ನೋವು,
ವಾಯು, ಅಜೀರ್ಣ,
ಅತಿಸಾರ ಮುಂತಾದ
ಸಮಸ್ಯೆಗಳನ್ನು ನಿವಾರಿಸುತ್ತದೆ. ಹೊಟ್ಟೆಯ ಮತ್ತು
ಸೊಂಟದ ಮಾಂಸಖಂಡಗಳನ್ನು ಬಲಪಡಿಸುತ್ತದೆ.
ಮಾನಸಿಕ ಖಿನ್ನತೆ ಮತ್ತು ಆತಂಕವನ್ನು ಕಡಿಮೆ
ಮಾಡುವಲ್ಲಿ ಪರಿಣಾಮಕಾರಿ.
3.ಅರ್ಧ ಹಲಾಸನ
3. ಅರ್ಧ ಹಲಾಸನ
ಹಲ ಎಂದರೆ ನೇಗಿಲು. ಅಂತಿಮ ಭಂಗಿಯಲ್ಲಿ
ದೇಹವು ಅರ್ಧ ನೇಗಿಲಿನಂತೆ ಕಾಣುವುದರಿಂದ ಈ
ಹೆಸರು.
ಪ್ರಯೋಜನಗಳು
ಮಲಬದ್ಧತೆಯನ್ನು ನಿವಾರಿಸುವಲ್ಲಿ ಈ ಆಸನವು
ಸಹಾಯಕ ಹಾಗೂ ಹೆಚ್ಚಿನ ರಕ್ತದೊತ್ತಡದಿಂದ
ಬಳಲುತ್ತಿರುವವರಿಗೂ ಪ್ರಯೋಜಕ. ಆದರೆ ಇದನ್ನು
ತ ರ ಬೇತಿ
ಪಡೆ ದಿರುವ ಬೋ ಧ ಕ ರ
ಮೇಲ್ವಿಚಾರಣೆಯಲ್ಲಿ ಮಾಡಬೇಕು.
4.ಪವನಮುಕ್ತಾಸನ
- ಪವನಮುಕ್ತಾಸನ
ಪವನ ಎಂದರೆ ವಾಯು ಮತ್ತು ಮುಕ್ತ ಎಂದರೆ
ಹೋಗಲಾಡಿಸುವುದು. ಈ ಆಸನ ವಾಯುವನ್ನು
ಹೊರಹಾಕಲು ಸಹಾಯಕವಾಗುತ್ತದೆ.
ಪ್ರಯೋಜನಗಳು
ಮಲಬದ್ಧತೆಯನ್ನು
ಮತ್ತು ವಾಯುವನ್ನು
ನಿವಾರಿಸುವಲ್ಲಿ ಸಹಾಯಕ. ಹೊಟ್ಟೆಯ ಉಬ್ಬರವನ್ನು
ಕಡಿಮೆ ಮಾಡುತ್ತದೆ ಮತ್ತು ಜೀರ್ಣಶಕ್ತಿಯನ್ನು
ಹೆಚ್ಚಿಸುತ್ತದೆ. ಆಂತರಿಕ ಒತ್ತಡವನ್ನು ಹೆಚ್ಚಿಸುವುದರಿಂದ
ಶ್ರೇಣಿ ಹಾಗು ಬೆನ್ನಿನ ಮಾಂಸಖಂಡಗಳ ಶಕ್ತಿ
ಹೆಚ್ಚಿಸುತ್ತದೆ. ಬೆನ್ನಿನ ಮಾಂಸಖಂಡಗಳು ಮತ್ತು
ನರಗಳನ್ನು ದೃಢಗೊಳಿಸುತ್ತದೆ.
5.ಶವಾಸನ
- ಶವಾಸನ
ಈ ಆಸನದ ಅಂತಿಮ ಭಂಗಿಯು ಮೃತ ದೇಹವನ್ನು
ಹೋಲುವುದರಿಂದ ಇದನ್ನು ಶವಾಸನ ಎಂದೂ
ಕರೆಯಲಾಗುತ್ತದೆ.
ಪ್ರಯೋಜನಗಳು
ಎಲ್ಲಾ ರೀತಿಯ
ಉದ್ವೇಗವನ್ನು ಕಡಿಮೆ
ಮಾಡುವುದರೊಂದಿಗೆ ದೇಹ ಹಾಗೂ ಮನಸ್ಸಿಗೆ
ವಿಶ್ರಾಂತಿ ಕಲ್ಪಿಸುತ್ತದೆ. ಈ ಆಸನದಿಂದ ಸದಾ
ಚಂಚಲವಾಗಿರುವ ಮನಸ್ಸಿನ ಗಮನವನ್ನು ಆಂತರಿಕ
ಸ್ಥಿತಿಯ ಕಡೆಗೆ ಸೆಳೆಯಲು ಸಾಧ್ಯವಾಗುತ್ತದೆ. ಮಾನಸಿಕ
ಒತ್ತಡ ಮತ್ತು ಅದರ ದುಷ್ಪರಿಣಾಮಗಳನ್ನು
ನಿವಾರಿಸಲು ಸಹಾಯ ಮಾಡುತ್ತದೆ.
6.ಕಪಾಲಭಾತಿ
- ಕಪಾಲಭಾತಿ
ಅನುಕೂಲಕರವಾದ ಧ್ಯಾನದ ಭಂಗಿಯಲ್ಲಿ
ಕುಳಿತುಕೊಳ್ಳಬೇಕು.
ಪ್ರಯೋಜನಗಳು
ಮುಖದಲ್ಲಿರುವ ಸೈನಸ್ಗಳನ್ನು ಶುದ್ಧಿಕರಿಸುತ್ತದೆ.
ಕೆಮ್ಮಿನ
ತೊಂದರೆಯನ್ನು ಕಡಿಮೆಯಾಗಿಸುತ್ತದೆ.
ಕೆಮ್ಮು, ನೆಗಡಿ, ಸೈನಸೈಟಿಸ್, ಅಸ್ತಮಾ, ಶ್ವಾಸನಾಳದ
ಸೋಂಕು ಮುಂತಾದವುಗಳನ್ನು ನಿವಾರಿಸುವಲ್ಲಿ
ಸಹಾಯ ಮಾಡುತ್ತದೆ. ಇದು ದೇಹವನ್ನು
ಪುನರ್ನವೀಕರಿಸಿ, ಮುಖದ ಕಾಂತಿ ಹಾಗು
ಹೊಳಪನ್ನು ಹೆಚ್ಚಿಸುತ್ತದೆ. ನರಮಂಡಲವನ್ನು
ಸಬಲೀಕರಿಸಿ, ಜೀರ್ಣಾಂಗಗಳನ್ನು ಬಲಪಡಿಸುತ್ತದೆ.
7.ಪ್ರಾಣಾಯಾಮ
- ಪ್ರಾಣಾಯಾಮ
ನಾಡಿ ಶೋಧನ ಅಥವಾ ಅನುಲೋಮ ವಿಲೋಮ
ಪ್ರಾಣಾಯಾಮ(ಪರ್ಯಾಯ ಮೂಗಿನ ಹೊಳ್ಳೆಯಿಂದ ಉಸಿರಾಟ)
ಪರ್ಯಾಯ
ಮೂಗಿನ
ಅಥವಾ
ಹೊಳ್ಳೆಯಿಂದ ಉಸಿರನ್ನು ಹಿಡಿದು ಅಥವಾ
ಹಿಡಿಯದೇ
ಉಸಿರಾಡುವುದು ಈ ಪ್ರಾಣಾಯಾಮದ
ವೈಶಿಷ್ಟ್ಯ.
ಪ್ರಯೋಜನಗಳು
ಮನಃ ಶಾಂತಿಯನ್ನುಂಟು ಮಾಡುವುದರೊಂದಿಗೆ
ಏಕಾಗ್ರತೆಯನ್ನೂ ಹೆಚ್ಚಿಸುತ್ತದೆ. ಉತ್ಸಾಹವನ್ನು
ಹೆಚ್ಚಿಸುವುದರೊಂದಿಗೆ ಮಾನಸಿಕ ಒತ್ತಡ ಮತ್ತು
ಆತಂಕವನ್ನು ಕಡಿಮೆ ಮಾಡುತ್ತದೆ. ಕೆಮ್ಮಿನ ಸಮಸ್ಯೆ
ಕಡಿಮೆ ಮಾಡುತ್ತದೆ.
8.ಶೀತಲೀ ಪ್ರಾಣಾಯಾಮ
- ಶೀತಲೀ ಪ್ರಾಣಾಯಾಮ
ಶೀತಲೀ ಎಂದರೆ ತಂಪಾಗಿರುವುದು ಅಥವಾ
ತಣಿಸುವುದು. ಇದರ
ಇನ್ನೊಂದು
ಅರ್ಥ
ಶಾಂತವಾಗಿಸುವುದು. ಈ ಹೆಸರು ಸೂಚಿಸುವಂತೆ ಈ
ಪ್ರಾಣಾಯಾಮದಿಂದ
ಶಾಂತವಾಗುತ್ತದೆ.
ದೇಹ ಮತ್ತು ಮನಸ್ಸು
ಈ ಪ್ರಾಣಾಯಾಮವನ್ನು
ವಿಶೇಷವಾಗಿ ದೇಹದ ತಾಪಮಾನವನ್ನು ಕಡಿಮೆ
ಮಾಡಲು ರೂಪಿಸಲಾಗಿದೆ. ಈ ಪ್ರಾಣಾಯಾಮದ
ಅಭ್ಯಾಸದಿಂದ ದೇಹದ ವ್ಯವಸ್ಥೆಯಲ್ಲಿ
ಸಾಮರಸ್ಯವಿರುತ್ತದೆ ಮತ್ತು ಮನಃ ಶಾಂತಿ
ಕಾಯ್ದುಕೊಳ್ಳಬಹುದು.
ಪ್ರಯೋಜನಗಳು
ದೇಹ ಮತ್ತು ಮನಸ್ಸನ್ನು ತಂಪುಗೊಳಿಸುತ್ತದೆ. ಹೆಚ್ಚಿನ
ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಇದು ಬಹಳ
ಉಪಯೋಗಕರ, ಬಾಯಾರಿಕೆ ಮತ್ತು ಹಸಿವನ್ನು
ನೀಗಿಸುತ್ತದೆ. ಅಜೀರ್ಣ
ಮತ್ತು ವಾತ ಕಫದ
ಸಮಸ್ಯೆಯನ್ನು
ನಿವಾರಿಸುತ್ತದೆ. ಚರ್ಮ
ಹಾಗೂ ಕಣ್ಣಿನ ಆರೋಗ್ಯಕ್ಕೆ
ಇದು ಪ್ರಯೋಜಕ.
9.ಬ್ರಮರಿ ಪ್ರಾಣಾಯಾಮ
- ಬ್ರಮರಿ ಪ್ರಾಣಾಯಾಮ
ಬ್ರಮರಿ ಪದವನ್ನು ಸಂಸ್ಕೃತದ ಭ್ರಮದ (ಕಪ್ಪು ದುಂಬಿ)
ಎಂಬ
ಪದದಿ೦ದ
ಪಡೆಯಲಾಗಿದೆ.
ಪ್ರಾಣಾಯಾಮ ಮಾಡುವಾಗ ಹೊರಹಾಕುವ ಶಬ್ದವು
ದುಂಬಿಯ ಝೇಂಕಾರದಂತೆ ಭಾಸವಾಗುವುದರಿಂದ
ಇದನ್ನು ಬ್ರಮರಿ ಎಂದು ಕರೆಯಲಾಗುತ್ತದೆ.
ಪ್ರಯೋಜನ ಗಳು
ಇದರ ಅಭ್ಯಾಸದಿಂದ ಮಾನಸಿಕ ಒತ್ತಡ
ಕಡಿಮೆಯಾಗುವುದರೊಂದಿಗೆ
ಆತಂಕ,
ಕೋಪಗೊಳ್ಳುವುದು, ಹೈಪರ್ ಆಕ್ಟಿವಿಟಿ
ಮುಂತಾದವುಗಳನ್ನು ನಿವಾರಿಸಲು ಸಹಾಯಕ.
ಝೇಂಕಾರದಿಂದ
ಉಂಟಾಗುವ
ಅನುರಣವು
ನರಮಂಡಲ ಮತ್ತು ಮನಸ್ಸಿನ ಮೇಲೆ ಹಿತಕರವಾದ
ಪರಿಣಾಮ ಬೀರುತ್ತದೆ. ಇದು ಒಂದು ಉತ್ತಮ
ನಿದ್ರಾಜನಕ ಮತ್ತು ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ
ಸಮಸ್ಯೆಗಳನ್ನು ನಿರ್ವಹಣೆ
ಮಾಡುವಲ್ಲಿ ಸಹಾಯಕ.
ಏಕಾಗ್ರತೆಯನ್ನು ಹೆಚ್ಚಿಸಲು
ಮತ್ತು ಧ್ಯಾನ ಕ್ಕೆ
ಪೂರ್ವಸಿದ್ದತೆಯಂತೆ ಈ
ಪ್ರಾಣಾಯಾಮವು
ಪ್ರಯೋಜನಕಾರಿ.
10.ಧ್ಯಾನ
- ಧ್ಯಾನ
ಧ್ಯಾನವು ಸತತ ಚಿಂತನೆಯ ಒಂದು ಕ್ರಿಯೆಯಾಗಿದೆ.
ಪ್ರಯೋಜನಗಳು
ಧ್ಯಾನವು ಯೋಗಾಭ್ಯಾಸದ ಪ್ರಮುಖ
ಪರಿಕಲ್ಪನೆಯಾಗಿದೆ. ಋಣಾತ್ಮಕ ಭಾವನೆಗಳು, ಕೋಪ,
ದುಃಖ, ಭಯ, ಆತಂಕ ಮುಂತಾದವುಗಳನ್ನು
ಹೋಗಲಾಡಿಸಿ, ಧನಾತ್ಮಕ ಭಾವನೆಗಳನ್ನು ರೂಪಿಸಲು
ಸಹಾಯ ಮಾಡುತ್ತದೆ. ಮನಸ್ಸನ್ನು
ಶಾಂತವಾಗಿರಿಸುತ್ತದೆ. ಏಕಾಗ್ರತೆ, ನೆನಪಿನ ಶಕ್ತಿ,
ಮಾನಸಿಕ ಸ್ಪಷ್ಟತೆ ಮತ್ತು ಇಚ್ಛಾಶಕ್ತಿಯನ್ನು ಹೆಚ್ಚಿಸುತ್ತದೆ.
ದೇಹ ಮತ್ತು ಮನಸ್ಸನ್ನು ಪುನಶ್ವೇತನಗೊಳಿಸುತ್ತದೆ.
ಧ್ಯಾನದಿಂದ ಸ್ವಯಂ ಸಾಕ್ಷಾತ್ಕಾರವಾಗುತ್ತದೆ.
11.ಶಾಂತಿ ಪಾಠ
- ಶಾಂತಿ ಪಾಠ
ಓಂ ಸರ್ವೆ ಭವಂತು ಸುಖನಃ ಸರ್ವೆ ಸಂತು
ನಿರಾಮಯಾಃ ॥
ಸರ್ವೆ ಭದ್ರಾಣಿ ಪಶ್ಯಂತು ಮಾ
ಕಶ್ಚಿದ್ದು:ಖಭಾಗ್ಯವೇತ್ |
| ಓಂ ಶಾಂತಿಃ ಶಾಂತಿಃ ಶಾಂತಿಃ
ಎಲ್ಲರೂ ಸುಖವಾಗಿರಲಿ, ಎಲ್ಲರೂ ರೋಗದಿಂದ
ಮುಕ್ತರಾಗಿರಲಿ |
ಎಲ್ಲರೂ ಒಳ್ಳೆಯದನ್ನು ಕಾಣಲಿ, ಯಾರೂ
ಬಳಲದಿರಲಿ ||
|| ಓಂ ಶಾಂತಿಃ ಶಾಂತಿಃ ಶಾಂತಿಃ ||
ಹೊಟ್ಟೆಯ ಮೇಲೆ ಮಲಗಿ ಮಾಡುವ ಆಸನಗಳು
1.ಮಕರಾಸನ
- ಮಕರಾಸನ
ಸಂಸ್ಕೃತದಲ್ಲಿ ಮಕರ ಎಂದರೆ ಮೊಸಳೆ ಈ ಆಸನದಲ್ಲಿ ದೇಹ ದ ಭ೦ಗಿಯು
ಮೊಸಳೆಯನ್ನು
ಹೋಲುವುದರಿಂದ ಇದಕ್ಕೆ ಮಕರಾಸನ ಎಂದು
ಕರೆಯಲಾಗುತ್ತದೆ.
ಪ್ರಯೋಜನಗಳು
ಸಂಪೂರ್ಣ ದೇಹದ ವಿಶ್ರಾಂತಿಗೆ. ಬೆನ್ನಿನ
ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಸಹಾಯ
ಮಾಡುತ್ತದೆ. ಮಾನಸಿಕ ಒತ್ತಡ ಹಾಗು ಆತಂಕವನ್ನು
ಕಡಿಮೆ ಮಾಡಿಕೊಳ್ಳಲು ಸಹಾಯಕಾರಿ.
2.ಭುಜಂಗಾಸನ
- ಭುಜಂಗಾಸನ
ಭುಜಂಗ ಎಂದರೆ ಹಾವು/ಸರ್ಪ. ಈ ಆಸನದಲ್ಲಿ
ದೇಹವನ್ನು ಹಾವಿನ ಹೆಡೆಯಂತೆ ಎತ್ತುವುದರಿಂದ
ಇದನ್ನು ಭುಜಂಗಾಸನ ಎಂದು ಕರೆಯುತ್ತಾರೆ.
ಪ್ರಯೋಜನಗಳು
ಈ ಆಸನವು ಮಾನಸಿಕ ಒತ್ತಡ, ಹೊಟ್ಟೆಯ
ಭಾಗದಲ್ಲಿರುವ ಬೊಜ್ಜು ಮತ್ತು ಮಲಬದ್ಧತೆಯನ್ನು
ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಉಸಿರಾಟದ
ಸಮಸ್ಯೆ ಮತ್ತು ಬೆನ್ನು ನೋವಿನಲ್ಲೂ ಇದು
ಪರಿಣಾಮಕಾರಿಯಾಗಿದೆ.
3.ಶಲಭಾಸನ
- ಶಲಭಾಸನ
ಶಲಭ ಎಂದರೆ ಮಿಡತೆ,
ಪ್ರಯೋಜನಗಳು
ಸೈಯಾಟಿಕಾ ಮತ್ತು ಬೆನ್ನು ನೋವಿನ ಸಮಸ್ಯೆಗಳಲ್ಲಿ
ಪ್ರಯೋಜಕ, ತೊಡೆಗಳ ಹಾಗು ಪೃಷ್ಠದಲ್ಲಿನ ಬೊಜ್ಜನ್ನು
ಕರಗಿಸಲು ಹಾಗು ದೇಹದ ತೂಕವನ್ನು ಕಡಿಮೆ
ಮಾಡಲು ಆ ಆಸನ ಸಹಾಯಕ, ಶ್ವಾಸಕೋಶಗಳ
ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
(21.06.2022) ರಂದು *ಅಂತಾರಾಷ್ಟ್ರೀಯ ಯೋಗ ದಿನಾಚರಣೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆ
ಜೂನ್ 21- ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸುವ ದಿನವಾಗಿದೆ.
ಯೋಗ ಎಂಬುದು ಭಾರತದಲ್ಲಿ ಹುಟ್ಟಿರುವ ಜಾಗತಿಕ ವಿದ್ಯೆಯಾಗಿದೆ. ಯೋಗದ ಮಹತ್ವವನ್ನು ಅರಿತ ವಿಶ್ವಸಂಸ್ಥೆ ಪ್ರತೀ ವರ್ಷದ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನ ವನ್ನಾಗಿ ಆಚರಿಸಬೇಕೆಂದು ಘೋಷಿಸಿದೆ.
ಯೋಗವು 6000 ದಿಂದ 7000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಕ ಅಭ್ಯಾಸವಾಗಿದೆ ಎನ್ನುತ್ತಾರೆ. ಪ್ರತಿವರ್ಷದ ಯೋಗದ ಆಚರಣೆಯು ಯೋಗ, ಧ್ಯಾನ, ಸಭೆಗಳು, ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ಎಲ್ಲಾ ರಾಷ್ಟ್ರ್ರಗಳ ಜನರಿಂದ ಆಚರಿಸಲ್ಪಡುವ ದಿನವಾಗಿದೆ.
2014 ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸುವ ಕುರಿತಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪವನ್ನು ಮಂಡಿಸಿದ್ದರು.
ಯೋಗದ ಮಹತ್ವ
ಯೋಗ ವ್ಯಾಯಾಮ ಮಾತ್ರವಲ್ಲದೆ ನಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುವ ವಿಶೇಷ ಕಲೆಯಾಗಿದೆ.
ಇತಿಹಾಸ:
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. 2015, ಜೂನ್ 21 ರಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು.
ಜೂನ್21 ರಂದೇ ಯೋಗದಿನಾಚರಣೆ ಏಕೆ?
ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ದೀರ್ಘಕಾಲದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ.
ದಕ್ಷಿಣಯಾನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು, ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ. ಬೇಸಿಗೆ ಅಯನ ಸಂಕ್ರಾಂತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ.
ಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘವಾದ ದಿನವಾಗಿದೆ. ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ, ಭಾರತೀಯರಿಗೆ ಪ್ರಕೃತಿಗೆ ಗೌರವ ಸಲ್ಲಿಸುವುದು ಆಧ್ಯಾತ್ಮಿಕತೆಯ ಅವಿಭಾಜ್ಯ ಅಂಗವಾಗಿದೆ. ಹಾಗೆಯೇ ಪ್ರಕೃತಿಯ ಕೊಡುಗೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತೇವೆ ಎಂದು ಹೇಳಿದ್ದರು.
ಆಚರಣೆ:
2015 ಜೂನ್ 21ರಂದು ಮೊದಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಷ್ ಸಚಿವಾಲಯದ ನೇತೃತ್ವದಲ್ಲಿ ಆ ದಿನವನ್ನು ರಾಜಪಥದಲ್ಲಿ ಭಾರೀ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಭಾಗವಹಿಸಿದ ಕಾರ್ಯಕ್ರಮದಲ್ಲಿ 21 ಯೋಗಾಸನಗಳನ್ನು ಅಭ್ಯಸಿಸಲಾಯಿತು.
2015ರಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 10 ರೂಪಾಯಿಯ ನಾಣ್ಯವನ್ನು ಬಿಡುಗಡೆ ಮಾಡಿತು.
ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆ. ಇದು ನಮ್ಮ ದೇಹದ ಅಂಶಗಳನ್ನು ಸಮತೋಲನಗೊಳಿಸುವ ಮೂಲಕ ನಾವು ಮಾಡುವ ವ್ಯಾಯಾಮ. ಇದಲ್ಲದೆ, ಇದು ಧ್ಯಾನ ಮತ್ತು ವಿಶ್ರಾಂತಿ ಪಡೆಯಲು ನಮಗೆ ಸಹಾಯ ಮಾಡುತ್ತದೆ.
ಇದಲ್ಲದೆ, ಯೋಗವು ನಮ್ಮ ದೇಹದ ಮೇಲೆ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ. ನಮ್ಮ ಒತ್ತಡ ಮತ್ತು ಆತಂಕವನ್ನು ಬಿಡುಗಡೆ ಮಾಡಲು ಇದು ಉತ್ತಮ ಚಾನಲ್ ಆಗಿದೆ. ಯೋಗ ಕ್ರಮೇಣ ಜನಪ್ರಿಯತೆಯನ್ನು ಗಳಿಸಿತು ಮತ್ತು ಈಗ ವಿಶ್ವದ ಎಲ್ಲಾ ಪ್ರದೇಶಗಳಲ್ಲಿ ಹರಡಿದೆ. ಇದು ಜನರನ್ನು ಸಾಮರಸ್ಯ ಮತ್ತು ಶಾಂತಿಯಿಂದ ಒಂದುಗೂಡಿಸುತ್ತದೆ.
ಯೋಗ ಎಂದರೇನು? ( What is yoga )
ಹಿಂದೂ ಆಧ್ಯಾತ್ಮಿಕ ಮತ್ತು ತಪಸ್ವಿ ಶಿಸ್ತು, ಇದರ
ಒಂದು ಭಾಗವೆಂದರೆ, ಉಸಿರಾಟ ನಿಯಂತ್ರಣ, ಸರಳ
ಧ್ಯಾನ ಮತ್ತು ನಿರ್ದಿಷ್ಟ ದೈಹಿಕ ಭಂಗಿಗಳನ್ನು
ಅಳವಡಿಸಿಕೊಳ್ಳುವುದು ಸೇರಿದಂತೆ ಆರೋಗ್ಯ ಮತ್ತು ವಿಶ್ರಾಂತಿಗಾಗಿ ವ್ಯಾಪಕವಾಗಿ ಅಭ್ಯಾಸ ಮಾಡಲಾಗುತ್ತದೆ.
ಅಂತರಾಷ್ಟ್ರೀಯ ಯೋಗ ದಿನ ( International Yoga day ) :
ಜೂನ್ ೨೧ (21) ಅನ್ನು ಅಂತರಾಷ್ಟ್ರೀಯ ಯೋಗ ದಿನವೆಂದು ಸಂಯುಕ್ತ ರಾಷ್ಟ್ರ ಸಂಸ್ಥೆಯು ಘೋಷಿಸಿದೆ.
ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ಘ ದಿನವಾದ ಜೂನ್ ೨೧ (21) ರಂದು ವಿಶ್ವ ಯೋಗ ದಿನ ಆಚರಿಸುವಂತೆ ಕರೆ ನೀಡಿದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವ:
2015ರ ನಂತರ ಯೋಗ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಮತ್ತು ಅದರ ವಿವಿಧ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜೂನ್ 21 ರಂದು ಪ್ರಪಂಚದಾದ್ಯಂತ ವಾರ್ಷಿಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಇದನ್ನು ಅಭ್ಯಾಸ ಮಾಡುವುದರಿಂದ ಪಡೆಯಬಹುದಾದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸುವುದು ಇದರ ಉದ್ದೇಶವಾಗಿದೆ. ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ದೀರ್ಘ ದಿನವಾಗಿದೆ.
ಅಂತರಾಷ್ಟ್ರೀಯ ಯೋಗ ದಿನದ ದಿನಾಂಕ ಮತ್ತು ಥೀಮ್:
ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ಆಚರಿಸಲಾಗುತ್ತಿದೆ.
ವಿಶ್ವ ಯೋಗ ದಿನವನ್ನು ಪ್ರತಿವರ್ಷ ವಿಶಿಷ್ಟ ವಿಷಯದೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ.
ಯೋಗದ ಪ್ರಯೋಜನಗಳು (Benefits of yoga ) :
ನಾವು ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಯೋಗಕ್ಕೆ ಹಲವಾರು ಪ್ರಯೋಜನಗಳಿವೆ.
• ನಾವು ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಿದಾಗ ನಮಗೆ ಪರಿಹಾರ ಸಿಗುತ್ತದೆ. ಇದು ನಮ್ಮ ಮನಸ್ಸು ಮತ್ತು ದೇಹದಿಂದ ಬರುವ ಕಾಯಿಲೆಗಳನ್ನು ದೂರವಿರಿಸುತ್ತದೆ.
• ಇದಲ್ಲದೆ, ನಾವು ಹಲವಾರು ಆಸನಗಳು ಮತ್ತು ಭಂಗಿಗಳನ್ನು ಅಭ್ಯಾಸ ಮಾಡುವಾಗ, ಅದು ನಮ್ಮ ದೇಹವನ್ನು ಬಲಪಡಿಸುತ್ತದೆ ಮತ್ತು ನಮಗೆ ಯೋಗಕ್ಷೇಮ ಮತ್ತು ಆರೋಗ್ಯದ ಭಾವನೆಯನ್ನು ನೀಡುತ್ತದೆ.
• ಇದಲ್ಲದೆ, ಯೋಗವು ನಮ್ಮ ಮನಸ್ಸನ್ನು ತೀಕ್ಷ್ಣಗೊಳಿಸಲು ಮತ್ತು ನಮ್ಮ ಬುದ್ಧಿವಂತಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಾವು ಯೋಗದ ಮೂಲಕ ಉನ್ನತ ಮಟ್ಟದ ಏಕಾಗ್ರತೆಯನ್ನು ಸಾಧಿಸಬಹುದು ಮತ್ತು ನಮ್ಮ ಭಾವನೆಗಳನ್ನು ಹೇಗೆ ಸ್ಥಿರಗೊಳಿಸಬಹುದು ಎಂಬುದನ್ನು ಸಹ ಕಲಿಯಬಹುದು.
• ಇಂದು ಹಿಂದೆಂದಿಗಿಂತಲೂ ನಮ್ಮನ್ನು ಪ್ರಕೃತಿಯೊಂದಿಗೆ ಸಂಪರ್ಕಿಸುತ್ತದೆ ಮತ್ತು ನಮ್ಮ ಸಾಮಾಜಿಕ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.
• ಇದಲ್ಲದೆ, ನಿಯಮಿತವಾಗಿ ಅಭ್ಯಾಸ ಮಾಡಿದರೆ ನಾವು ಯೋಗದಿಂದ ಸ್ವಯಂ-ಶಿಸ್ತು ಮತ್ತು ಸ್ವಯಂ-ಅರಿವನ್ನು ಬೆಳೆಸಿಕೊಳ್ಳಬಹುದು.
• ನಾವು ಅದನ್ನು ಸ್ಥಿರವಾಗಿ ಮಾಡಿದ ನಂತರ ನಾವು ಶಕ್ತಿಯ ಪ್ರಜ್ಞೆಯನ್ನು ಪಡೆಯುತ್ತೇವೆ ಮತ್ತು ಯಾವುದೇ ಸಮಸ್ಯೆಗಳಿಂದ ಮುಕ್ತವಾದ ಆರೋಗ್ಯಕರ ಜೀವನವನ್ನು ನಡೆಸಲು ನಮಗೆ ಸಹಾಯ ಮಾಡುತ್ತದೆ.
• ನಮ್ಮ ವಯಸ್ಸು ಏನೇ ಇರಲಿ ಅಥವಾ ನಾವು ಯಾವುದೇ ಧರ್ಮವನ್ನು ಅನುಸರಿಸಿದರೂ ಯಾರು ಬೇಕಾದರೂ ಯೋಗವನ್ನು ಅಭ್ಯಾಸ ಮಾಡಬಹುದು.
• ಯೋಗವು ಮಾನವಕುಲಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ, ಇದು ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಮತ್ತು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
• ನಾವು ಯೋಗವನ್ನು ಅಭ್ಯಾಸ ಮಾಡುವಾಗ ಹೆಚ್ಚಿನ ತಾಳ್ಮೆ ಮಟ್ಟವನ್ನು ಸಹ ಬೆಳೆಸಿಕೊಳ್ಳುತ್ತೇವೆ ಮತ್ತು ಇದು ನಕಾರಾತ್ಮಕ ಆಲೋಚನೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ನಾವು ಉತ್ತಮ ಮಾನಸಿಕ ಸ್ಪಷ್ಟತೆ ಮತ್ತು ಉತ್ತಮ ತಿಳುವಳಿಕೆಯನ್ನು ಪಡೆಯುತ್ತೇವೆ.
• ಯೋಗ ಉತ್ತಮ ಸ್ವ-ಆರೈಕೆಯನ್ನು ಉತ್ತೇಜಿಸುತ್ತದೆ.
• ಯೋಗವು ನಮ್ಮನ್ನು ಬೆಂಬಲಿಸುವ ಸಮುದಾಯದೊಂದಿಗೆ ಸಂಪರ್ಕಿಸುತ್ತದೆ.
• ಒತ್ತಡವನ್ನು ನಿರ್ವಹಿಸಲು ಯೋಗ ನಮಗೆ ಸಹಾಯ ಮಾಡುತ್ತದೆ
• ಯೋಗವು ಹೆಚ್ಚು ಶಕ್ತಿ ಮತ್ತು ಪ್ರಕಾಶಮಾನವಾದ ಮನಸ್ಥಿತಿಗಳನ್ನು ಅರ್ಥೈಸಬಲ್ಲದು.
• ಉತ್ತಮವಾಗಿ ನಿದ್ರೆ ಮಾಡಲು ಯೋಗವು ನಮಗೆ ವಿಶ್ರಾಂತಿ ನೀಡುತ್ತದೆ.
• ಯೋಗವು ಹೃದಯದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ
• ಯೋಗವು ಸಂಧಿವಾತದ ಲಕ್ಷಣಗಳನ್ನು ಸರಾಗಗೊಳಿಸುತ್ತದೆ.
• ಬೆನ್ನು ನೋವು ನಿವಾರಣೆಗೆ ಯೋಗ ಸಹಾಯ ಮಾಡುತ್ತದೆ.
• ಯೋಗ ಶಕ್ತಿ, ಸಮತೋಲನ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ.
• ಸಂಕ್ಷಿಪ್ತವಾಗಿ, ಯೋಗವು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದನ್ನು ಅಭ್ಯಾಸ ಮಾಡಬೇಕು ಮತ್ತು ಅದರಿಂದ ಪ್ರಯೋಜನ ಪಡೆಯಬೇಕು.
ಔಷಧಿಗಳಂತಹ ಯಾವುದೇ ಕೃತಕ ವಿಧಾನಗಳನ್ನು ಅಥವಾ ಯಾವುದೇ ರೀತಿಯ ಶಾರ್ಟ್ಕಟ್ಗಳನ್ನು ಬಳಸದೆ ಆರೋಗ್ಯಕರ ಮತ್ತು ದೀರ್ಘ ಜೀವನವನ್ನು ನಡೆಸುವುದು ಯೋಗದ ರಹಸ್ಯವಾಗಿದೆ.
ಯೋಗದ ಇತಿಹಾಸ (History of yoga ) :
ಯೋಗವು ಮೂಲಭೂತವಾಗಿ ಭಾರತದ ಉಪಖಂಡದಲ್ಲಿ ಹುಟ್ಟಿಕೊಂಡಿತು. ಇದು ಪ್ರಾಚೀನ ಕಾಲದಿಂದಲೂ ಇದೆ ಮತ್ತು ಇದನ್ನು ಯೋಗಿಗಳು ನಿರ್ವಹಿಸಿದರು. ಯೋಗ ಎಂಬ ಪದವನ್ನು ಸಂಸ್ಕೃತ ಪದದಿಂದ ಪಡೆಯಲಾಗಿದೆ, ಇದು ಮೂಲತಃ ಒಕ್ಕೂಟ ಮತ್ತು ಶಿಸ್ತು ಎಂದು ಅನುವಾದಿಸುತ್ತದೆ.
ಹಿಂದಿನ ದಿನಗಳಲ್ಲಿ ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಜೈನ ಧರ್ಮದ ಅನುಯಾಯಿಗಳು ಇದನ್ನು ಅಭ್ಯಾಸ ಮಾಡುತ್ತಿದ್ದರು. ನಿಧಾನವಾಗಿ, ಇದು ಪಾಶ್ಚಿಮಾತ್ಯ ದೇಶಗಳಲ್ಲಿ ತನ್ನ ದಾರಿಯನ್ನು ಕಂಡುಕೊಂಡಿತು. ಪ್ರಪಂಚದಾದ್ಯಂತದ ಜನರು ತಮ್ಮ ಮನಸ್ಸಿನ ವಿಶ್ರಾಂತಿಗಾಗಿ ಮತ್ತು ಅವರ ದೇಹವನ್ನು ಸದೃಢವಾಗಿಡಲು ಯೋಗವನ್ನು ನಿರ್ವಹಿಸುತ್ತಿದ್ದಾರೆ.
ಇದಲ್ಲದೆ, ಯೋಗದ ಈ ಜನಪ್ರಿಯತೆಯ ನಂತರ, ಭಾರತವು ವಿಶ್ವದಾದ್ಯಂತ ಯೋಗಕ್ಕೆ ಹೆಸರುವಾಸಿಯಾಗಿದೆ. ಪ್ರಪಂಚದಾದ್ಯಂತ ಜನರು ಯೋಗದ ಪ್ರಯೋಜನಗಳನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ. ಹಲವಾರು ಕಾರ್ಯಾಗಾರಗಳು ನಡೆಯುತ್ತವೆ ಮತ್ತು ಈಗ ಈ ಪ್ರಾಚೀನ ಅಭ್ಯಾಸವನ್ನು ಜನರಿಗೆ ಕಲಿಸುವ ವೃತ್ತಿಪರ ಯೋಗಿಗಳೂ ಇದ್ದಾರೆ,
ಯೋಗದ ಅಭ್ಯಾಸವು ನಾಗರಿಕತೆಯ ಉದಯದಿಂದಲೇ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಯೋಗದ ವಿಜ್ಞಾನವು ಅದರ ಮೂಲವನ್ನು ಸಾವಿರಾರು ವರ್ಷಗಳ ಹಿಂದೆ ಹೊಂದಿದೆ, ಮೊದಲ ಧರ್ಮಗಳು ಅಥವಾ ನಂಬಿಕೆ ವ್ಯವಸ್ಥೆಗಳು ಹುಟ್ಟಲು ಬಹಳ ಹಿಂದೆಯೇ ಯೋಗದ ಸಿದ್ಧಾಂತದಲ್ಲಿ, ಶಿವನನ್ನು ಮೊದಲ ಯೋಗಿ ಅಥವಾ ಆದಿಯೋಗಿ ಮತ್ತು ಮೊದಲ ಗುರು ಅಥವಾ ಆದಿ ಗುರು ಎಂದು ನೋಡಲಾಗುತ್ತದೆ.
ಹಲವಾರು ಸಾವಿರ ವರ್ಷಗಳ ಹಿಂದೆ, ಹಿಮಾಲಯದ ಕಾಂತಿ ಸರೋವರದ ದಡದಲ್ಲಿ, ಅದಿಯೋಗಿ ತನ್ನ ಆಳವಾದ ಜ್ಞಾನವನ್ನು ಪೌರಾಣಿಕ ಸಪ್ತರ್ಷಿಗಳಿಗೆ ಅಥವಾ “ಏಳು ಋಷಿಮುನಿಗಳಿಗೆ” ಸುರಿದನು. ಪೂರ್ವ, ಉತ್ತರ ಆಫ್ರಿಕಾ ಮತ್ತು ದಕ್ಷಿಣ ಅಮೇರಿಕ ಭಾರತೀಯ ಉಪಖಂಡವು ಈ ಸಂಸ್ಕೃತಿಯನ್ನು ಒಂದು ಪ್ರಮುಖ ಯೋಗದ ಜೀವನ ವಿಧಾನದ ಸುತ್ತ ಹೆಣೆದಿದೆ.
ಅಷ್ಟಾಂಗಯೋಗ ಅಂಗಗಳು :
• ಯಮ
• ನಿಯಮ
• ಆಸನ
• ಪ್ರಾಣಾಯಾಮ
• ಪ್ರತ್ಯಾಹಾರ
• ಧಾರಣ
• ಧ್ಯಾನ
• ಸಮಾಧಿ
(ವರದಿ ಮೂಲ: ಅಂತರ್ಜಾಲ )