---Advertisement---

ಸಚೇತನ ಕಾರ್ಯಕ್ರಮದ ಆಗಸ್ಟ್ ತಿಂಗಳ ಚಟುವಟಿಕೆಗಳ ವಿವರ

By kspstadk.com

Published On:

Follow Us
---Advertisement---
WhatsApp Group Join Now
Telegram Group Join Now

ಹಿರಿಯ ಪ್ರಾಥಮಿಕ
ಕ್ಷೇತ್ರ : ಸಣ್ಣ ಕಥೆಗಳು

  • ಪಠ್ಯಪುಸ್ತಕದಲ್ಲಿ ಅಥವಾ ಗ್ರಂಥಾಲಯದಲ್ಲಿನ ಪುಸ್ತಕಗಳಲ್ಲಿ ಇರುವ ನೀತಿ ಕಥೆಯನ್ನು ಹೇಳುವುದು.
  • ಶೌರ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳ ಯಶೋಗಾಥೆಗಳನ್ನು ಸಂಗ್ರಹಿಸಿ ಹೇಳುವುದು.
  • ಪಂಚತಂತ್ರ ಕಥೆಗಳನ್ನು ಸಂಗ್ರಹಿಸಿ ಹೇಳುವುದು
  • ಪಠ್ಯದಲ್ಲಿರುವ/ತನಗಿಷ್ಟವಾದ ಕಥೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಹೇಳುವುದು. ಕ್ಷೇತ್ರ : ರಾಷ್ಟ್ರೀಯತೆ
  • ಪಠ್ಯ/ಶಿಕ್ಷಕರ ಸಹಾಯದಿಂದ ದೇಶಭಕ್ತಿ ಗೀತೆಗಳನ್ನು ಸಂಗ್ರಹಿಸಿ ಹಾಡುವುದು .
  • ರಾಷ್ಟ್ರಧ್ವಜದ ಪರಿಚಯ ಮತ್ತು ಮಹತ್ವ ತಿಳಿಸುವುದು.
  • ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹೋರಾಟದಲ್ಲಿ ಭಾಗವಹಿಸಿದ ಕನ್ನಡಿಗರ ಪರಿಚಯ ಮಾಡುವುದು. * ಸ್ವಾತಂತ್ರ್ಯ ದಿನಾಚರಣೆಯ ದಿನ ಸಹಪಾಠಿಗಳೊಂದಿಗೆ ದೇಶಭಕ್ತಿ ಗೀತೆಗಳು ನೃತ್ಯ ಮಾಡುವುದು.

ಕ್ಷೇತ್ರ : ಮೌಲ್ಯ ಶಿಕ್ಷಣ

  • ಮಕ್ಕಳು ದಿನನಿತ್ಯ ಜೀವನದಲ್ಲಿ ಮನೆಯವರಿಗೆ ಮತ್ತು ನೆರೆಹೊರೆಯವರಿಗೆ ಹೇಗೆ ಮತ್ತು ಯಾವ ರೀತಿಯ ಸಹಕಾರ ಮತ್ತು ಸಹಾಯ ಮಾಡಬಹುದು ಎಂದು ಪ್ರಸ್ತುತಪಡಿಸುವುದು.
  • ಮಕ್ಕಳಲ್ಲಿ ಸ್ವಯಂಶಿಸ್ತು ಮತ್ತು ಸಮಯ ಪಾಲನೆ ಮೂಡಿಸುವಂತಹ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅರ್ಥ ಮಾಡಿಸುವುದು.
  • ಅನುಭೂತಿ ಮತ್ತು ಸಹಾನುಭೂತಿ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸುವುದು.
    *ಮಕ್ಕಳು ಶಿಕ್ಷಕರಿಗೆ, ಹಿರಿಯರಿಗೆ ಮತ್ತು ಕಿರಿಯರಿಗೆ ಹೇಗೆ ಸ್ಪಂದಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂಬುದನ್ನು ತಿಳಿಸುವುದು. ರಾಷ್ಟ್ರೀಯ ಸದ್ಭಾವನ ದಿನಾಚರಣೆ.
  • ಸಮಾಜದಲ್ಲಿ ಶಾಂತಿ ಮತ್ತು ಸಾಮರ್ಥ್ಯವನ್ನು ಕಾಪಾಡುವ ಬಗ್ಗೆ ಮಕ್ಕಳು ಪ್ರಜ್ಞೆ ಮೂಡಿಸುವರು.
  • ಕ್ಷೇತ್ರ :ಕ್ರೀಡೆಗಳು
  • ಕ್ರೀಡೆಗಳ ಪರಿಚಯ ಮಾಡುವುದು.
  • ಕಬಡ್ಡಿ ಕೋಕೋ ವಾಲಿಬಾಲ್ ಕ್ರೀಡೆಗಳನ್ನು ಆಟವಾಡಲು ಬೇಕಾದ ಆಟಗಾರರ ಸಂಖ್ಯೆ, ಆಟದ ನಿಯಮಗಳು ಅಂಕಣದ ಅಳತೆ ಮತ್ತು ಪ್ರಶಸ್ತಿಗಳ ಬಗ್ಗೆ ತಿಳಿಸುವುದು.
  • ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಡಲು ಇರುವ ಅವಕಾಶಗಳನ್ನು ತಿಳಿಸುವುದು.
  • ಕ್ರೀಡೆಯಲ್ಲಿ ಸಾಧನೆ ಮಾಡಿದ ಸಾಧಕರ ಹೆಸರುಗಳು ಮತ್ತು ಅವರಿಗೆ ದೊರೆತ ಪ್ರಶಸ್ತಿಗಳನ್ನು ತಿಳಿಸುವುದು.
  • ರಾಷ್ಟ್ರೀಯ ಕ್ರೀಡಾ ದಿನಾಚರಣೆ
    ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನ. ಅವರ ಬಗ್ಗೆ ಮಕ್ಕಳು ವಿವರಿಸುವರು.

ಕಿರಿಯ ಪ್ರಾಥಮಿಕ


ಕ್ಷೇತ್ರ :ಸಣ್ಣ ಕಥೆಗಳು

  • ಪಠ್ಯಪುಸ್ತಕದಲ್ಲಿ ಅಥವಾ ಗ್ರಂಥಾಲಯದಲ್ಲಿನ ಪುಸ್ತಕದಲ್ಲಿರುವ ನೀತಿ ಕಥೆಯನ್ನು ಓದುವುದು.
  • ಪಂಚತಂತ್ರ ಕಥೆಗಳನ್ನು ಸಂಗ್ರಹಿಸಿ ಹೇಳುವುದು.
  • ಪಠ್ಯದಲ್ಲಿರುವ ಅಥವಾ ತನಗೆ ಇಷ್ಟವಾದ ಕಥೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಹೇಳುವುದು. ಕ್ಷೇತ್ರ :ರಾಷ್ಟ್ರೀಯತೆ
  • ಪಠ್ಯ /ಶಿಕ್ಷಕರ ಸಹಾಯದಿಂದ ದೇಶಭಕ್ತಿ ಗೀತೆಗಳನ್ನು ಸಂಗ್ರಹಿಸಿ ಹಾಡುವುದು.
  • ರಾಷ್ಟ್ರಧ್ವಜದ ಪರಿಚಯ ಮತ್ತು ಮಹತ್ವ ತಿಳಿಸುವುದು. * ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾಗವಹಿಸಿದ ಕನ್ನಡಿಗರ ಪರಿಚಯ ಮಾಡುವುದು.

ಕ್ಷೇತ್ರ : ಛದ್ಮವೇಷ/ ಅಭಿನಯ

  • ಹಿರಿಯರ/ ಶಿಕ್ಷಕರ ಸಹಾಯದಿಂದ ಕ್ಯಾಲೆಂಡರ್ ನಲ್ಲಿ ನೀಡಿರುವ ಗಣ್ಯ ವ್ಯಕ್ತಿಗಳ ಛದ್ಮವೇಷ ಧರಿಸುವುದು. ಮಾತಿನ ಅನುಕರಣೆ ಮಾಡಬಹುದು. ರಾಷ್ಟ್ರೀಯ ಸದ್ಭಾವನಾ ದಿನಾಚರಣೆ
    ರಾಜೀವಗಾಂಧಿಯವರ ಜನ್ಮದಿನ. ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವ ಬಗ್ಗೆ ಮಕ್ಕಳು ಪ್ರಜ್ಞೆ ಮೂಡಿಸುವರು. ಕ್ಷೇತ್ರ : ಸಮುದಾಯದ ಸೇವಕರು
  • ಹಿರಿಯರ ಶಿಕ್ಷಕರ ಸಹಾಯದಿಂದ ಸಮುದಾಯ ಸೇವಕರ ಕೆಲಸದ ಕುರಿತು ಹೇಳುವುದು.
  • ಸಮಾಜಕ್ಕೆ ಅವರ ಕೊಡುಗೆಗಳನ್ನು ತಿಳಿಸುವುದು.
    *ಸಾಧನೆ ಮಾಡಿದ ಸಮುದಾಯ ಸೇವಕರ ಚಿತ್ರ ಪ್ರದರ್ಶನ ಮಾಡಬಹುದು .

ರಾಷ್ಟ್ರೀಯ ಕ್ರೀಡಾ ದಿನ
ಹಾಕಿ ಮಂತ್ರಿಕ ಅವರ ಜನ್ಮದಿನ ಧ್ಯಾನ್ ಚಂದ್ ಅವರ ಸಾಧನೆ ಬಗ್ಗೆ ಮಕ್ಕಳು ವಿವರಿಸುವರು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment