---Advertisement---

ಗೃಹ ಜ್ಯೋತಿ ಫಲಾನುಭವಿಗಳಿಗೆ ಮಹತ್ವದ ಸುದ್ದಿಮನೆ ಮನೆಗೆ ಬರಲಿದ್ದಾರೆ ಎಸ್ಕಾಂ ಸಿಬ್ಬಂದಿ..ಈ ಮಾಹಿತಿಗಳು ಸಿದ್ಧವಾಗಿರಲಿ

By kspstadk.com

Updated On:

Follow Us
---Advertisement---
https://kspstadk.com/gruhajyothi
WhatsApp Group Join Now
Telegram Group Join Now


ಕರ್ನಾಟಕ ಸರ್ಕಾರದ ಅತ್ಯಂತ ಜನಪ್ರಿಯ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’ ಯೋಜನೆಯ ಫಲಾನುಭವಿಗಳಿಗೆ ಇಂಧನ ಇಲಾಖೆಯು ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆಯುತ್ತಿರುವ ಗ್ರಾಹಕರ ಅರ್ಹತೆಯನ್ನು ಮರುಪರಿಶೀಲಿಸಲು ಮತ್ತು ನೈಜ ಫಲಾನುಭವಿಗಳನ್ನು ಗುರುತಿಸಲು ಸರ್ಕಾರ ನಿರ್ಧರಿಸಿದೆ.
ಇದಕ್ಕಾಗಿ ಗ್ರಾಹಕರಿಂದ 6 ಹೆಚ್ಚುವರಿ ಮಾಹಿತಿಗಳನ್ನು ಸಂಗ್ರಹಿಸಲು ವಿದ್ಯುತ್ ಸರಬರಾಜು ಕಂಪನಿಗಳಿಗೆ (ESCOMs) ಸೂಚನೆ ನೀಡಿದೆ.


ಸರ್ಕಾರದ ಇತ್ತೀಚಿನ ಆದೇಶದನ್ವಯ, ಜುಲೈ 1, 2026 ರಿಂದ ಜಾರಿಗೆ ಬರುವಂತೆ ಎಸ್ಕಾಂ ಸಿಬ್ಬಂದಿ ಭೇಟಿ ನೀಡಲಿದ್ದಾರೆ.
ಮೀಟರ್ ರೀಡರ್‌ಗಳು ಅಥವಾ ಇತರೆ ಸಿಬ್ಬಂದಿ ಪ್ರತಿ ಗೃಹ ಜ್ಯೋತಿ ಯೋಜನೆಯಡಿ ನೋಂದಾಯಿತವಾಗಿರುವ ಮನೆಗಳಿಗೆ ಖುದ್ದಾಗಿ ಭೇಟಿ ನೀಡುತ್ತಾರೆ.

ಈ ಹೆಚ್ಚುವರಿ ಮಾಹಿತಿ ಸಂಗ್ರಹಣೆ ಹಾಗೂ ಸೇವಾಸಿಂಧು ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡುವ ಪ್ರಕ್ರಿಯೆಯನ್ನು ಎರಡು ತಿಂಗಳ ಒಳಗಾಗಿ ಕಡ್ಡಾಯವಾಗಿ ಪೂರ್ಣಗೊಳಿಸಲು ಇಂಧನ ಇಲಾಖೆ ಗಡುವು ವಿಧಿಸಿದೆ.


  1. ಹಲವರು ಮೃತಪಟ್ಟಿರುವುದು
  2. ಬಾಡಿಗೆದಾರರು ಮನೆ ಬದಲಾಯಿಸಿರುವುದು
  3. ಮನೆ ಖರೀದಿ/ಮಾರಾಟ ಪ್ರಕ್ರಿಯೆಗಳು ನಡೆದಿದ್ದರೂ ಸೇವಾಸಿಂಧು ತಂತ್ರಾಂಶದಲ್ಲಿ ಮಾಹಿತಿ ಪರಿಷ್ಕರಣೆಯಾಗದಿರುವುದು

ಈ ಹಿನ್ನೆಲೆಯಲ್ಲಿ, ಯೋಜನೆಯ ಸೌಲಭ್ಯವು ಕೇವಲ ‘ಜೀವಂತ ಮತ್ತು ಅರ್ಹ ಫಲಾನುಭವಿಗಳಿಗೆ’ ಮಾತ್ರ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಈ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದೆ.


ಈಗಾಗಲೇ ಆಧಾರ್ ಮತ್ತು ಆರ್‌.ಆರ್ ಸಂಖ್ಯೆ ನೀಡಿ ನೋಂದಾಯಿಸಿಕೊಂಡಿರುವ ಗ್ರಾಹಕರು, ಎಸ್ಕಾಂ ಸಿಬ್ಬಂದಿ ಮನೆಗೆ ಬಂದಾಗ ಈ ಕೆಳಗಿನ ವಿವರಗಳನ್ನು ನೀಡಬೇಕಾಗುತ್ತದೆ:

  1. ಪಡಿತರ ಚೀಟಿ (Ration Card)
    ಎಪಿಎಲ್/ಬಿಪಿಎಲ್ ಅಥವಾ ರೇಷನ್ ಕಾರ್ಡ್ ಇಲ್ಲದಿರುವ ಬಗ್ಗೆ ಮಾಹಿತಿ.
    ಬಿಪಿಎಲ್ ಕಾರ್ಡ್ ಆಗಿದ್ದರೆ ಅದರ ಸಂಖ್ಯೆ.
  2. ಮತದಾರರ ಗುರುತಿನ ಚೀಟಿ (Voter ID)
    ಕರ್ನಾಟಕ ರಾಜ್ಯದ ನೋಂದಾಯಿತ ಮತದಾರರೇ ಹೌದೇ ಅಥವಾ ಇಲ್ಲವೇ?
    ಹೌದಾಗಿದ್ದರೆ ಎಪಿಕ್ (EPIC) ಸಂಖ್ಯೆ.
  3. ಭಾವಚಿತ್ರ (Photo)
    ಅರ್ಜಿದಾರರ ಪ್ರಸ್ತುತ ಭಾವಚಿತ್ರ.
  4. ಫಲಾನುಭವಿಯ ಪ್ರವರ್ಗ (Category)
    ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು ಅಥವಾ ಇತರೆ ವರ್ಗಕ್ಕೆ ಸೇರಿದವರೇ ಎಂಬ ವಿವರ.
  5. ಆದಾಯ ತೆರಿಗೆ ವಿವರ (Income Tax)
    ಫಲಾನುಭವಿಯು ಆದಾಯ ತೆರಿಗೆ ಪಾವತಿದಾರರೇ ಹೌದೇ ಅಥವಾ ಇಲ್ಲವೇ?
    ಹೌದಾಗಿದ್ದರೆ ಪ್ಯಾನ್ (PAN) ಕಾರ್ಡ್ ಸಂಖ್ಯೆ.
  6. ವೃತ್ತಿ (Profession)
    ಗ್ರಾಹಕರ ಉದ್ಯೋಗದ ವಿವರ – ಸರ್ಕಾರಿ / ಖಾಸಗಿ ಉದ್ಯೋಗ / ವ್ಯಾಪಾರ / ರೈತ / ಕೂಲಿ ಕಾರ್ಮಿಕ ಇತ್ಯಾದಿ.

ಗಮನಿಸಿ:
ಎಸ್ಕಾಂ ಸಿಬ್ಬಂದಿಗಳು ಈ ಮೇಲಿನ ಮಾಹಿತಿಯನ್ನು ಪಡೆದು ‘ಸೇವಾಸಿಂಧು’ ತಂತ್ರಾಂಶದಲ್ಲಿ ದಾಖಲಿಸಿದ ಬಳಿಕ, ಗ್ರಾಹಕರಿಂದ ಮಾಹಿತಿ ನೀಡಿರುವುದರ ಕುರಿತು ದೃಢೀಕರಣವನ್ನೂ ಪಡೆಯಲಿದ್ದಾರೆ.
ಮಾಲೀಕರು ಅಥವಾ ಬಾಡಿಗೆದಾರರು ದೃಢೀಕರಿಸಬೇಕು.

ಇನ್ನುಳಿದಂತೆ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದ ಉಚಿತ ಯೂನಿಟ್‌ಗಳ ಮಿತಿ ಹಾಗೂ ಇತರೆ ಯಾವುದೇ ನಿಯಮಗಳಲ್ಲಿ ಬದಲಾವಣೆ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment