C AND R ಸಚಿವರಿಗೆ ಸಲ್ಲಿಸಿರುವ ಮನವಿಯ ಕುರಿತು ಸ್ಪಷ್ಟೀಕರಣ25/11/22

IMG 20221126 WA0033


ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ)ಬೆಂಗಳೂರು

ಆತ್ಮೀಯರೇ
ಇಂದು ಮಾನ್ಯ ಸಚಿವರಿಗೆ ನೀಡಿದ ಮನವಿ ಬಗಯ ಸ್ಪಷ್ಟೀಕರಣ

ಇಂದು ಮಾನ್ಯ ಸಚಿವರಿಗೆ 06 ರಿಂದ 08 ಕ್ಕೆ 40% ಮುಂಬಡ್ತಿ ನಿಯುಕ್ತಿಗೊಳಿಸುವ ಸಂಬಂಧ ಮಾನ್ಯ ಸಚಿವರು ಪುನಃ ಅನುಮೋದನೆ ನೀಡಿರುವುದು ಅತ್ಯಂತ ಅಭಿನಂದನಾರ್ಹ.
ಅದರ ಜೊತೆಗೆ ITC,TCH,D’ED ಮುಗಿಸಿ ನೇಮಕಾತಿ ಆದ ಶಿಕ್ಷಕರು ಸಹ ಪದವಿಯನ್ನು ಪೂರ್ಣಗೊಳಿಸಿದ ಶಿಕ್ಷಕರು ಸಹ 06 ರಿಂದ 08 ಕ್ಕೆ ಅರ್ಹರೆಂದು ಪರಿಗಣಿಸಲಾಗಿದೆ. ಆದರೆ ರಾಜ್ಯದ ಕೆಲವು ಶಿಕ್ಷಕರು ಬಿಇಡ್ ಸಹ ಅವಶ್ಯಕವೇ ಎಂದು ಗೊಂದಲವನ್ನುಂಟು ಮಾಡುತ್ತಿದ್ದು, ಈ ಮೂಲಕ ಸರ್ವರಿಗೂ ತಿಳಿಯಪಡಿಸುತ್ತ “ಯಾವುದೇ ಡಿಗ್ರಿ” ಕಡ್ಡಾಯ ವಾಗಿರುತ್ತದೆ ಹಾಗೂ “ಬಿಇಡ್ ಕಡ್ಡಾಯ ಆಗಿರುವುದಿಲ್ಲ” ಎಂದು ತಮ್ಮೆಲ್ಲರ ಗಮನಕ್ಕೆ ತರಬಯಸುತ್ತೇವೆ.ಹಾಗೂ ಯಾರೂ ಸಹ ಇಂದಿನ‌ ಮನವಿಯ ಬಗ್ಗೆ ಗೊಂದಲಕ್ಕೆ ಒಳಗಾಗಬಾರದೆಂದು ತಮ್ಮ ಗಮನಕ್ಕೆ ತರಬಯಸುತ್ತೇವೆ.

ತಮ್ಮ
ಶಂಭುಲಿಂಗನಗೌಡ ಪಾಟೀಲ
ರಾಜ್ಯಾಧ್ಯಕ್ಷರು
ಚಂದ್ರಶೇಖರ ನುಗ್ಗಲಿ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ)ಬೆಂಗಳೂರು

IMG 20221126 WA0032
Sharing Is Caring:

Leave a Comment