---Advertisement---

ಸಚೇತನ ಕಾರ್ಯಕ್ರಮದ ಜೂನ್ ತಿಂಗಳ ಚಟುವಟಿಕೆಗಳ ವಿವರ

By kspstadk.com

Published On:

Follow Us
---Advertisement---
WhatsApp Group Join Now
Telegram Group Join Now
  • ಅರಣ್ಯಗಳ ಪ್ರಾಮುಖ್ಯತೆಯನ್ನು ವಿವರಿಸುವುದು.
  • ವಿವಿಧ ಅರಣ್ಯಗಳ ಚಿತ್ರಗಳನ್ನು ಮಕ್ಕಳಿಗೆ ತೋರಿಸುವ ಮೂಲಕ ಅರಣ್ಯಗಳ ಪರಿಚಯ ಮಾಡುವುದು.
  • ಭಾರತ ಕರ್ನಾಟಕದಲ್ಲಿರುವ ವಿವಿಧ ಅರಣ್ಯಗಳನ್ನು ಪಟ್ಟಿ ಮಾಡಿ ತಿಳಿಸುವುದು.
  • ಅರಣ್ಯಗಳು ಹೇಗೆ ಹವಮಾನದ ಮೇಲೆ ಪರಿಣಾಮ ಬೀರುತ್ತವೆ ಎಂದು ವಿವರಿಸುವುದು,
  • ನಮ್ಮ ದಿನನಿತ್ಯದ ಜೀವನದಲ್ಲಿ ಕೃಷಿ ಎಷ್ಟು ಮುಖ್ಯ ಎಂದು ವಿವರಿಸುವುದು .
    *ಆಹಾರ ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳನ್ನು ವಿವರಿಸಿವುದು.
    *ನಿಮ್ಮ ಮನೆಯ ಸುತ್ತಮುತ್ತ ಬೆಳೆಯುವ ಯಾವುದಾದರೂ ಒಂದು ಬೆಳೆಯ ಬಗ್ಗೆ ವಿವರಣೆ ನೀಡುವುದು.
  • ಕೃಷಿ ಸಲಕರಣೆಗಳ ಪರಿಚಯ ಮಾಡುವುದು.
  • ನಮ್ಮ ಸುತ್ತಲಿನ ಪರಿಸರ ಮತ್ತು ಪರಿಸರದಿಂದ ಆಗುವ ಪ್ರಯೋಜನಗಳನ್ನು ಬಿತ್ತಿಪತ್ರಗಳನ್ನು ತೋರಿಸುವ ಮೂಲಕ ವಿವರಿಸುವುದು.
  • ಶಾಲೆಯ ಸುತ್ತಮುತ್ತಲಿನ ಪರಿಸರದ ಬಗ್ಗೆ ವಿವರಿಸುವುದು.
  • ಪರಿಸರಕ್ಕೆ ಮಕ್ಕಳ ಕೊಡುಗೆಗಳನ್ನು ಪರಿಚಯಿಸುವುದು. *ಶಾಲೆಯ ಸುತ್ತಮುತ್ತಲಿನ ಪರಿಸರದ ಬಗ್ಗೆ ವಿವರಿಸಿವುದು *ಪರಿಸರಕ್ಕೆ ಮಕ್ಕಳ ಕೊಡುಗೆಗಳನ್ನು ಪಟ್ಟಿ ಮಾಡಿ ಹಂಚಿಕೊಳ್ಳುವುದು. ಪರಿಸರ ಮಾಲಿನ್ಯ
    *ವಾಹನಗಳಿಂದ ಹೇಗೆ ಪರಿಸರ ಮಾಲಿನ್ಯ ಆಗುತ್ತದೆ ಎಂದು ವಿವರಿಸುವುದು.
    *, ಕಾರ್ಖಾನೆಗಳಿಂದ ಪ್ಲಾಸ್ಟಿಕ್ ಬಳಕೆಯಿಂದ ಹೇಗೆ ಪರಿಸರ ಮಾಲಿನ್ಯಗೊಳ್ಳುತ್ತದೆ ವಿವರಿಸುವುದು .
  • ಪರಿಸರ ನಾಶದ ದುಷ್ಪರಿಣಾಮಗಳನ್ನು ನಾಟಕ ಪ್ರದರ್ಶನದ ಮೂಲಕ ಅರ್ಥ ಮಾಡಿಸುವುದು.
  • ಪರಿಸರದ ಬಗ್ಗೆ ರಸಪ್ರಶ್ನೆಯನ್ನು ಕೇಳುವುದು.( ವಿಶ್ವ ಪರಿಸರ ದಿನವನ್ನು ಯಾವಾಗ ಆಚರಿಸುತ್ತಾರೆ? ಪರಿಸರ ಪ್ರೇಮಿ ಎಂದು ಯಾರನ್ನು ಕರೆಯುತ್ತಾರೆ? ಇತ್ಯಾದಿ ) *ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳನ್ನು ಹೆಸರಿಸುವುದು‌.


ಋತುಮಾನದ ಹಣ್ಣುಗಳ ಪರಿಚಯ


ಮಿಂಚು ಪಟ್ಟಿ/ಪ್ಲಕ್ ಕಾರ್ಡ್ ಮೂಲಕ ಒಂದು ಕಡೆ ಕಾಲ ಮತ್ತು ಒಂದು ಕಡೆ ಹಣ್ಣುಗಳ ಚಿತ್ರಗಳನ್ನು ತೋರಿಸಿ, ವಿವರಿಸುವುದು. ಒಂದು ಮಗು ಕಾಲಗಳನ್ನು ಪ್ಲಕ್ ಕಾರ್ಡು ಮೂಲಕ ತೋರಿಸುವುದು. ಇತರ ಮಕ್ಕಳು ವಿವಿಧ ಹಣ್ಣುಗಳ ವೇಷ ಧರಿಸಿ ಪರಿಚಯ ಮಾಡಿಸಿಕೊಳ್ಳುವುದು. ಉದಾಹರಣೆಗೆ : ನಾನು ಮಾವಿನಹಣ್ಣು ಬೇಸಿಗೆ ಕಾಲದಲ್ಲಿ ನಿಮಗೆ ತಿನ್ನಲು ಲಭ್ಯವಿರುತ್ತೇನೆ.

ಕಾಲಗಳು ಮತ್ತು ಉಡುಗೆಗಳು


*ಬೇರೆ ಬೇರೆ ಕಾಲದಲ್ಲಿ ಬಳಸುವ ಉಡುಗೆ ತೊಡುಗೆಗಳ ಚಿತ್ರಗಳನ್ನು ತೋರಿಸಿ ಅವುಗಳ ಬಗ್ಗೆ ವಿವರಿಸುವುದು. (ಲಭ್ಯವಿದ್ದಲ್ಲಿ ಪ್ರದರ್ಶಿಸಿ ವಿವರಿಸುವುದು)
*ಪ್ರಾದೇಶಿಕ ಉಡುಗೆ ತೊಡುಗೆಗಳು ಮತ್ತು ಬಳಸುವ ಕಚ್ಚಾವಸ್ತುಗಳ ಬಗ್ಗೆ ವಿವರಿಸುವುದು.
*ಉಡುಗೆಗಳು ತಯಾರಿಸುವ ವಿವಿಧ ವಿಧಾನಗಳನ್ನು ವಿವರಿಸಿವುದು. ನೂಲು ತೆಗೆಯುವುದು, ನೇಯುವುದು, ಬಣ್ಣ ಕಟ್ಟುವುದು ಇತ್ಯಾದಿ.

ನಗರ ಮತ್ತು ಗ್ರಾಮೀಣ ಜೀವನಶೈಲಿ :


*ನಗರ ಮತ್ತು ಗ್ರಾಮೀಣ ಜನರ ಜೀವನಶೈಲಿ ಕುರಿತು ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳುವುದು.
*ಸಲಹಾತ್ಮಕ ವಿಷಯಗಳು ಗ್ರಾಮೀಣ ಮತ್ತು ನಗರ ಭಾಗದಲ್ಲಿ ಕಂಡುಬರುವ ಆಟಗಳು, ಆಹಾರ, ಪದ್ಧತಿ, ವಾಸ ಸ್ಥಳ , ಮಾಲಿನ್ಯ ,ಪ್ರಾಣಿ ಪಕ್ಷಿಗಳು, ಜನಸಂಖ್ಯೆ ಇತ್ಯಾದಿ.

  • ಹಳ್ಳಿಯ ಸೊಗಡನ್ನು ಮತ್ತು ನಗರ ಜೀವನ ಶೈಲಿಯನ್ನು ನಾಟಕಗಳ ಮೂಲಕ ಪ್ರದರ್ಶಿಸುವುದು.

ಮಣ್ಣಿನ ವಿಧಗಳು ಮತ್ತು ಅದರ ಬಳಕೆ

  • ಮಣ್ಣಿನ ವಿಧಗಳನ್ನು ವಿವರಿಸಿವುದು.
  • ವಿವಿಧ ಮಣ್ಣುಗಳನ್ನು ಸಂಗ್ರಹಿಸಿ ಪ್ರದರ್ಶಿಸುವುದು. *ಮಣ್ಣಿನಿಂದ ಆಗುವ ಪ್ರಯೋಜನಗಳು ಏನು ಎಂದು ವಿವರಿಸುವುದು.( ಹೆಚ್ಚಿನ ಮಾಹಿತಿಗಾಗಿ 7ನೇ ತರಗತಿಯ ವಿಜ್ಞಾನ ಭಾಗ ಒಂದು ಪುಸ್ತಕದ 7ನೇ ಅಧ್ಯಾಯವನ್ನು ಗಮನಿಸುವುದು)


ವಿಜ್ಞಾನ ಸರಳ ಪ್ರಯೋಗಗಳ ಪರಿಚಯ :&
ಮಕ್ಕಳು 5 ನಿಮಿಷಗಳ ಒಳಗಾಗಿ ಮಾಡುವ ವಿಜ್ಞಾನ ಪ್ರಯೋಗಗಳನ್ನು ಮಾಡಿ ತೋರಿಸುವುದು. (ಉದಾಹರಣೆಗಳು:- ಸರಳ ಬಲೂನ್ ಕಾರ್ ಚಟುವಟಿಕೆ, ಅಡಿಗೆ ಸೋಡಾ ಜ್ವಾಲಾಮುಖಿ ಲ, ಬೆಳಕಿನ ಚಲನೆಗಳು , ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ, ಪದಾರ್ಥಗಳನ್ನು ಬೇರ್ಪಡಿಸುವಿಕೆ , ಗಾಳಿಗೆ ತೂಕವಿದೆ (5ನೇ ತರಗತಿಯ ಪರಿಸರ ಅಧ್ಯಯನ ಪುಸ್ತಕದ ಪುಟ ಸಂಖ್ಯೆ 28ನ್ನು ಗಮನಿಸಿ)

ನೀರಿನ ಮೂಲಗಳು ಮತ್ತು ಅವುಗಳ ಮಹತ್ವ:-

  • ನೀರಿನ ಮೂಲಗಳು ಯಾವುವು ಎಂದು ತಿಳಿಸುವುದು. (ನದಿಗಳು ಕೆರೆಗಳು, ಕೊಳವೆಬಾವಿ ಇತ್ಯಾದಿ)
  • ನೀರಿನ ಮೂಲಗಳು ಹೇಗೆ ಕಲುಷಿತಗೊಳ್ಳುತ್ತವೆ ?ಎಂದು ವಿವರಿಸುವುದು.
  • ಶಾಲೆ ಇರುವ ಪ್ರದೇಶದಲ್ಲಿನ ನೀರಿನ ಮೂಲಗಳನ್ನು ಪಟ್ಟಿ ಮಾಡಿ ವಿವರಿಸುವುದು.

ನೈಸರ್ಗಿಕ ಸಂಪನ್ಮೂಲಗಳು :-


*ನೈಸರ್ಗಿಕ ಸಂಪನ್ಮೂಲಗಳು ಯಾವುವು? ಎಂದು ಪಟ್ಟಿ ಮಾಡಿ ತಿಳಿಸುವುದು.

  • ನೈಸರ್ಗಿಕ ಸಂಪನ್ಮೂಲಗಳ ವಿಧಗಳನ್ನು ವಿವರಿಸಿವುದು. *ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮಾಡುವುದು ಹೇಗೆ? ಎಂಬುದನ್ನು ವಿವರಿಸುವುದು( 5ನೇ ತರಗತಿಯ ಪರಿಸರ ಅಧ್ಯಯನ ಪುಸ್ತಕದ ನೈಸರ್ಗಿಕ ಸಂಪನ್ಮೂಲ ಪಾಠಗಳಲ್ಲಿರುವ ಒಗಟುಗಳನ್ನು ಪರಿಚಯಿಸುವುದು) ಸಸ್ಯಗಳ ಪೋಷಣೆ:-
  • ಸಸ್ಯಗಳ ಪೋಷಣೆ ಸಸ್ಯಗಳ ಪೋಷಣೆಗೆ ಬೇಕಾದ ಅಂಶಗಳನ್ನು ವಿವರಿಸುವುದು, ಫಲವತ್ತಾದ ಮಣ್ಣು ಗೊಬ್ಬರ ನೀರು ಗಾಳಿ ಇತ್ಯಾದಿ.
  • ಸಸ್ಯಗಳ ಪೋಷಣೆಯ ಬಗ್ಗೆ ರಸಪ್ರಶ್ನೆಯನ್ನು ಹಮ್ಮಿಕೊಳ್ಳುವುದು.( ಗಮನಿಸಬಹುದು ಏಳನೇ ತರಗತಿಯಲ್ಲಿ ಇರುವ ಸಸ್ಯಗಳ ಪೋಷಣೆಯ ಪಾಠ )
  • ಸಾವಯವ ಗೊಬ್ಬರ ತಯಾರಿಕೆಯ ಬಗ್ಗೆ ತಿಳಿಸುವುದು.


*ಕಥೆ ಹೇಳುವುದು
*ನೀತಿ ಕಥೆಗಳನ್ನು ಹೇಳುವುದು ಮತ್ತು ಅದರಲ್ಲಿರುವ ನೀತಿಯನ್ನು ತಿಳಿಸಿ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಸೂಚಿಸುವುದು.

ಸಾಮಾಜಿಕ ಪಿಡುಗು ಪಿಡುಗುಗಳ ಬಗ್ಗೆ ನಾಟಕ ಹಾಗೂ ಹಾಡುಗಳ ಮೂಲಕ ಜಾಗೃತಿ :
ಬಾಲ್ಯ ವಿವಾಹ ಬಾಲಕಾರ್ಮಿಕ ಪದ್ಧತಿ ಅಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಸಣ್ಣ ನಾಟಕ ಮತ್ತು ಹಾಡುಗಳ ಮೂಲಕ ಜಾಗೃತಿ ಮೂಡಿಸುವುದು.

ಗಾದೆಗಳು
*ವಿವಿಧ ಗಾದೆಗಳನ್ನು ಸಂಗ್ರಹಿಸುವುದು.
*ಗಾದೆಗಳನ್ನು ವಿವರಿಸಿ ಅದರ ಅರ್ಥವನ್ನು ವಿವರಿಸುವುದು, *ಕಥೆಗಳ ಮೂಲಕ ಗಾದೆಗಳನ್ನು ವಿವರಿಸಿವುದು (ಉದಾಹರಣೆ: ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಬಗ್ಗೆ ಮಕ್ಕಳನ್ನು ಕುರಿತು ಕಥೆಯನ್ನು ಹೆಣೆಯಬಹುದು.

  • ಮಕ್ಕಳನ್ನು ಉತ್ತೇಜಿಸುವ ಮತ್ತು ಮಕ್ಕಳ ಕಲಿಕೆಗೆ ಸಂಬಂಧಿಸಿದ ಗಾದೆಗಳನ್ನು ಪರಿಚಯಿಸುವುದು.
    (ಉದಾಹರಣೆಗೆ ನಾಳೆ ಎಂದವನಿಗೆ ಹಾಳು ಇಂದೇ ಎಂದವನಿಗೆ ಬೀಳಾಗದು ಬಾಳು. ಒಗ್ಗಟ್ಟಿನಲ್ಲಿ ಬಲವಿದೆ )

ಭಾಷಣ
*ಶಿಕ್ಷಕರು ನೀಡಿದ ನಿರ್ದಿಷ್ಟ ವಿಷಯಗಳಿಗೆ ತಯಾರಾಗಿ ಭಾಷಣ ಮಾಡುವರು.
( ಉದಾಹರಣೆ:- ಪರಿಸರ ದಿನ, ಯಶಸ್ಸು ,ಸ್ನೇಹ, ಕ್ರೀಡೆ ಆರೋಗ್ಯ, ಶಿಕ್ಷಣ, ಆನ್ಲೈನ್ ತರಗತಿಗಳು, ಜಂಕ್ ಫುಡ್, ಮರವನ್ನು ಉಳಿಸಿ ಇದರ ಕುರಿತು ಭಾಷಣ ಇತ್ಯಾದಿ)

ಓದು ಮತ್ತು ಅಭಿನಯ:-
ಮಕ್ಕಳು ಆಯ್ಕೆ ಮಾಡಿದ ಚೀಟಿಯಲ್ಲಿ ಬರೆದಿರುವುದನ್ನು ಓದುವುದು ಮತ್ತು ಅದರಲ್ಲಿ ಕೊಟ್ಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಅಭಿನಯಿಸುವುದು.

1001577617
1001577618
1001577619
1001577620
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment