ಶಿಕ್ಷಕರ ವರ್ಗಾವಣೆ ತಿದ್ದುಪಡಿ ವಿಧೇಯಕ 2022

ಶಿಕ್ಷಕರ ವರ್ಗಾವಣಾ ವಿಧೇಯಕ ತಿದ್ದುಪಡಿ ಇಂದು ವಿಧಾನಸಭೆಯಲ್ಲಿ ಇದೀಗ ತಾನೇ ಅಂಗೀಕಾರಗೊಂಡಿದೆ.
ತಿದ್ದುಪಡಿ ವಿಧೇಯಕವನ್ನು ಮಂಡಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಬಿ.ಸಿ. ನಾಗೇಶ್ ಸಾಹೇಬರಿಗೆ ತುಂಬು ಹೃದಯದ ಧನ್ಯವಾದಗಳು ಈ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ ಶಂಭುಲಿಂಗನಗೌಡ ಪಾಟೀಲ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ ನುಗ್ಗಲಿ ಹಾಗೂ ರಾಜ್ಯ ಕೋಶಾಧ್ಯಕ್ಷರಾದ ಶ್ರೀ ಸುರೇಶ ಶೆಡಶಾಳ ಅವರು ತಿದ್ದುಪಡಿ ವಿಧೇಯಕ ಮಂಡನೆಯಾಗುವ ಸಂದರ್ಭದಲ್ಲಿ ಉಪಸ್ಥಿತರಿದ್ದರು

IMG 20220923 WA0022
IMG 20220922 WA0031

ಶಿಕ್ಷಕರ ವರ್ಗಾವಣೆ : ಮತ್ತಷ್ಟು ನೆಮ್ಮದಿಯ ಬದಲಾವಣೆಗಳು.

ಆತ್ಮೀಯ ಶಿಕ್ಷಕ ಬಂಧುಗಳೇ,

ಇಂದು ಮಾನ್ಯ ಶಿಕ್ಷಣ ಸಚಿವರಿಂದ ಸದನದಲ್ಲಿ ಮಂಡಿಸಲ್ಪಟ್ಟು,ಅನುಮೋದನೆಗೊಂಡ ‘ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ (ತಿದ್ದುಪಡಿ)ಯು, ವರ್ಗಾವಣೆ ಆಕಾಂಕ್ಷಿಗಳಿಗೆ ಮತ್ತಷ್ಟು ನೆಮ್ಮದಿಯನ್ನು ತಂದುಕೊಟ್ಟಿದೆ‌.

🙂🙂🙂 25%ಗೂ ಅಧಿಕ ಖಾಲಿ ಹುದ್ದೆ ಇರುವ ಶೈಕ್ಷಣಿಕ ಬ್ಲಾಕ್ (ತಾಲೂಕು) ನ ಶಿಕ್ಷಕರಿಗೆ ನಿಬಂಧನೆಗಳೊಂದಿಗೆ ವರ್ಗಾವಣೆಗೆ ಅವಕಾಶ
🎯 ಒಂದೇ ವೃಂದ & ತಾಲೂಕಿನಲ್ಲಿ 10 ವರ್ಷ ಸೇವೆ ಸಲ್ಲಿಸಿದವರಿಗೆ,
ಅಥವಾ
🎯 ಒಂದೇ ತಾಲೂಕಿನಲ್ಲಿ ವಿವಿಧ ವೃಂದ (AM,HM) ಗಳಲ್ಲಿ 15 ವರ್ಷ ಸೇವೆ ಸಲ್ಲಿಸಿದವರಿಗೆ ಅವಕಾಶ

🙂 ಕನಿಷ್ಠ ಸೇವಾವಧಿ:”ಪ್ರಸ್ತುತ ಶಾಲೆಯಲ್ಲಿ 3 ವರ್ಷ ಸೇವೆ ಸಲ್ಲಿಸಿರಬೇಕು” ಎಂಬ ನಿಯಮವನ್ನು ಸುಧಾರಿಸಿ, ಹೆಚ್ಚುವರಿ ಮಾಡಿದ ಸಂದರ್ಭದಲ್ಲಿ‌ ಹಿಂದಿನ ಶಾಲಾ ಸೇವೆಯನ್ನು ಪರಿಗಣಿಸುವುದು.

🙂 ನಿರ್ದಿಷ್ಟ ಹುದ್ದೆಗಳ ಆಧ್ಯತಾ ಪಟ್ಟಿಯನ್ನು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸುವುದು.

🙂 ವರ್ಗಾವಣೆ ಮಿತಿಯಿಂದ
(೧) ತೀವ್ರತರ ಖಾಯಿಲೆ ಪ್ರಕರಣ,
(೨) ವಿಕಲ ಚೇತನ ಪ್ರಕರಣ,
(೩) 12 ವರ್ಷ ವಯಸ್ಸಿನೊಳಗಿನ ಮಕ್ಕಳುಳ್ಳ ವಿಧವೆ,ವಿಧುರ, ವಿಚ್ಛೇದಿತ ಪ್ರಕರಣ,
(೪) ಸೈನಿಕ ಪ್ರಕರಣ,
(೫) ಪರಸ್ಪರ ವರ್ಗಾವಷೆ ಪ್ರಕರಣಗಳನ್ನು ಹೊರತುಪಡಿಸಿ ಲೆಕ್ಕ ಹಾಕುವುದು.

IMP
🙂 ಕಲ್ಯಾಣ ಕರ್ನಾಟಕ ಭಾಗ & EBBS ಗಳಿಗೆ ಇತರೆ ಘಟಕಗಳಿಂದ ವರ್ಗಾವಣೆ ಮಿತಿ‌ ಮೀರಿದ್ದಾಗ್ಯೂ ವರ್ಗಾವಣೆ ನೀಡಬಹುದು.

🙂🙂 ಪರಸ್ಪರ ವರ್ಗಾವಣೆ
🎯 ಆರಂಭಿಕ ಏಳು ವರ್ಷಗಳ ಸೇವೆ ಆಗಿದ್ದರೆ ಮಾತ್ರ ಪರಸ್ಪರ ವರ್ಗಾವಣೆ ಎಂಬ ನಿಯಮ‌ ಸಡಿಲಿಸಿ ಐದಯ ವರ್ಷಕ್ಕೆ ಇಳಿಸಲಾಗಿದೆ.

🙂 ಖಾಲಿ ಹುದ್ದೆ ಲೆಕ್ಕ ಹಾಕುವಾಗ ಪ್ರತ್ಯೇಕ ವೃಂದ (SHM,HM,AM,PET)ವಾರು ಲೆಕ್ಕ ಹಾಕುವ ಬದಲಾಗಿ ಎಲ್ಲಾ ಪ್ರಾಥಮಿಕ ವೃಂದಗಳ ಆಧಾರದ ಮೇಲೆ ಲೆಕ್ಕ ಹಾಕುವುದು.

🙂🙂 *ಪತಿ-ಪತ್ನಿ ಪ್ರಕರಣದಡಿ ಕೋರಿಕೆ ವರ್ಗಾವಣೆ ಸಂಬಂಧಿಸಿದಂತೆ ~ಸಂಗಾತಿ ಇರುವ ತಾಲೂಕಿಗೆ ಮಾತ್ರ ವರ್ಗಾವಣೆ ನೀಡುವುದು~ ಎಂಬುದರ ಬದಲಾಗಿ, *ಸಂಗಾತಿ‌ ಕಾರ್ಯ ನಿರ್ವಹಿಸುವ ತಾಲೂಕು ಇರುವ ಜಿಲ್ಲೆಯ ಯಾವುದೇ ಬ್ಲಾಕ್‌ಗೆ ವರ್ಗಾವಣೆ ಹೊಂದಲು ಅವಕಾಶ ನೀಡಲಾಗಿದೆ*.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಪ್ರಯತ್ನ ಮತ್ತು ಮಾನ್ಯ ಶಿಕ್ಷಣ ಸಚಿವರಿಗಿರುವ ಶಿಕ್ಷಕರ ಮೇಲಿನ ಕಳಕಳಿಯ ಫಲವಾಗಿ ವರ್ಗಾವಣೆಯು ಶಿಕ್ಷಕರಲ್ಲಿ ನೆಮ್ಮದಿ ಉಂಟು ಮಾಡಿದೆ.😌😌

ಸೂಚನೆ: ಈ ಲೇಖನದಲ್ಲಿ ಇರುವ ಅಂಶಗಳು ಪಾರಿಭಾಷಿಕದ ಯಥಪ್ರಕಾರವಾಗಿರದೆ, ಒಂದು ಕಿರುನೋಟವಾಗಿದೆ. ಪೂರ್ಣ ಪ್ರಮಾಣದ ಅರ್ಥಗ್ರಹಣಕ್ಕಾಗಿ ಮೂಲ ವಿಧೇಯಕವನ್ನು ಅನುಸರಿಸುವುದು.

✒️ ಶಿವಾನಂದ ಬಿಬಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು
KSPSTA, ವಿಜಯನಗರ

Sharing Is Caring:

Leave a Comment