---Advertisement---

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಿವೃತ್ತರಾದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ ಗುರುಭ್ಯೋ ನಮಃ

By kspstadk.com

Published On:

Follow Us
---Advertisement---

ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ

WhatsApp Group Join Now
Telegram Group Join Now

ಗುರುಭ್ಯೋ ನಮಃ

ಹಲವು ವರ್ಷಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ…..

ಶ್ರೀಮತಿ ಸರೋಜಾ ಪಿ ಎಸ್
ದೈಹಿಕ ಶಿಕ್ಷಣ ಶಿಕ್ಷಕಿ
ಸ.ಉ.ಪ್ರಾ.ಶಾಲೆ ಕುಟ್ಟಿಕಳ
ಬೆಳ್ತಂಗಡಿ ತಾಲೂಕು.

ಶಿವಣ್ಣ ಗೌಡ ಹಾಗೂ ಚಿನ್ನಮ್ಮ ದಂಪತಿಗಳ ಪುತ್ರಿಯಾಗಿ ದಿನಾಂಕ 01.01.1963 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ.ಶಾಲೆ ಪಾಲ್ತಾಡಿ ಹಾಗೂ ಸ.ಹಿ.ಪ್ರಾ.ಶಾಲೆ ಕೆಯ್ಯೂರು ಹಾಗೂ ಪ್ರೌಢ ಶಿಕ್ಷಣವನ್ನು ಸ.ಪ್ರೌಢ ಶಾಲೆ ಬೆಳ್ಳಾರೆ ಇಲ್ಲಿ ಪೂರೈಸಿ ಸಿ.ಪಿ.ಎಡ್ ಎಂ.ಕೆ.ಅನಂತರಾಜ್ ದೈಹಿಕ ಶಿಕ್ಷಣ ತರಬೇತಿ ಕೇಂದ್ರ ಮೂಡುಬಿದಿರೆ ಇಲ್ಲಿ ಪೂರೈಸಿ, ದಿನಾಂಕ 29.09.1994 ರಲ್ಲಿ ಸ.ಹಿ.ಪ್ರಾ.ಶಾಲೆ ಹಿರೇಬಂಡಾಡಿ ಇಲ್ಲಿಸೇವೆಗೆ ಸೇರಿ ಸೇವೆ ಸಲ್ಲಿಸಿ ನಂತರ ಇವರು ಸ.ಹಿ.ಪ್ರಾ.ಶಾಲೆ ಕೊಯಿಕುಳಿ ಸುಳ್ಯ ತಾಲೂಕು ಇಲ್ಲಿ ಸೇವೆಗೆ ಸೇರಿ ಸುಮಾರು 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 16.11.2019 ರಂದು ಸ.ಹಿ.ಪ್ರಾ.ಶಾಲೆ ಕುಟ್ಟಿಕಳ ಬೆಳ್ತಂಗಡಿ ತಾಲೂಕು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀ ನಾರಾಯಣ
ಮುಖ್ಯೋಪಾಧ್ಯಾಯರು ಕೆ.ಪಿ.ಎಸ್ ಮಿಜಾರು
ಮೂಡುಬಿದಿರೆ ತಾಲೂಕು

ಶ್ರೀ ಶಿವಪ್ಪ ಮೂಲ್ಯ ಹಾಗೂ ಶ್ರೀಮತಿ ಯಮುನಾ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಇನ್ಫೆಂಟ್ ಜೀಸಸ್ ಹಿ.ಪ್ರಾ.ಶಾಲೆ ಮೊಡಂಕಾಪು ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ದೀಪಿಕಾ ಪ್ರೌಢಶಾಲೆ ಮೊಡಂಕಾಪು ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರಕಾರಿ ಶಿಕ್ಷಕ ತರಬೇತಿ ಸಂಸ್ಥೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ಪೂರೈಸಿ ದಿನಾಂಕ 30.10.1982 ರಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿ ಸೇವೆಗೆ ಸೇರಿ ನಂತರ ದಿನಾಂಕ 01.06.1992 ರಲ್ಲಿ ವರ್ಗಾವಣೆಗೊಂಡು ಸ.ಹಿ.ಪ್ರಾ.ಶಾಲೆ ಬಂಟ್ವಾಳ ಮೂಡ ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ನಾಯಿಲ ನರಿಕೊಂಬು ಪಾಣೆಮಂಗಳೂರು ಇಲ್ಲಿಗೆ ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡು ಸೇವೆ ಸಲ್ಲಿಸಿ ನಂತರ ದಿನಾಂಕ 20.02.2014 ರಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರು ಇಲ್ಲಿ ಸೇವೆ ಸಲ್ಲಿಸಿ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀ ಮಾಯಿಲಪ್ಪ ಗೌಡ ಕೆ
ಪ್ರ.ಮುಖ್ಯಗುರುಗಳು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆ ಪುತ್ತೂರು ತಾಲೂಕು

ತಂದೆ: ದಿ.ಕೃಷ್ಣಪ್ಪ ಗೌಡ ಕೆ
ತಾಯಿ: ದಿ.ಎಲ್ಯಕ್ಕ ಕೆ
ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ಪೂರೈಸಿ, ಶಿಕ್ಷಕ ತರಬೇತಿಯನ್ನು ಡಯಟ್ ಮಂಗಳೂರಿನಲ್ಲಿ ಪಡೆದಿರುವಿರಿ. 12-02-1996ರಂದು ಸ.ಹಿ.ಪ್ರಾ.ಶಾಲೆ ಪುಳಿಕುಕ್ಕು ಸುಳ್ಯ ತಾಲೂಕುನಲ್ಲಿ ಸಹಶಿಕ್ಷಕ ರಾಗಿ ಶಿಕ್ಷಣ ಇಲಾಖೆಗೆ ಸೇರಿದಿರಿ.ಅಲ್ಲಿಂದ ವರ್ಗಾವಣೆ ಹೊಂದಿ 22-07-1999ರಲ್ಲಿ ಸ.ಹಿ.ಪ್ರಾ.ಶಾಲೆ ಕೊಳ್ತಿಗೆ ಪುತ್ತೂರು ತಾಲೂಕುಗೆ ಬಂದಿರಿ. ಅಲ್ಲಿಂದ ಇದುವರೆಗೂ ಸುಮಾರು 26 ವರ್ಷಗಳ ಕಾಲ ಸೇವೆ ಸಲ್ಲಿಸಿ ವೃತ್ತಿ ಜೀವನಕ್ಕೆ ನಿವೃತ್ತಿಯಾಗುತ್ತಿರುವಿರಿ.ಅಪಾರ ಶಿಷ್ಯ ಬಳಗವನ್ನು ಹೊಂದಿರುವ ತಾವು ಅವರ ಬಾಳಿಗೆ ಬೆಳಕಾಗಿದಿರಿ. ನಿಮ್ಮ ಧರ್ಮಪತ್ನಿ ಶ್ರೀಮತಿ ಉದಯಕುಮಾರಿ ಕೆ ಇವರೊಂದಿಗೆ ತಮ್ಮ ನಿವೃತ್ತ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.

ಶ್ರೀಮತಿ ಇಂದಿರಾ ಕೆ ಕೆ
ಮುಖ್ಯೋಪಾಧ್ಯಾಯರು
ಸ.ಹಿ.ಪ್ರಾ.ಶಾಲೆ ಜಟ್ಟಿಪಳ್ಳ
ಸುಳ್ಯ ತಾಲೂಕು

ಶ್ರೀ ಕೆ ಕೃಷ್ಣ ನಾಯ್ಕ ಹಾಗೂ ಶ್ರೀಮತಿ ಕೆ ಪಾರ್ವತಿ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ.ಶಾಲೆ ಕರಿಕೆ ಮಡಿಕೇರಿ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸೈಂಟ್ ಜೋಸೆಫ್ ಕಾನ್ವೆಂಟ್ ಮಡಿಕೇರಿ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಕೂಡಿಗೆ ಕೊಡಗು ಇಲ್ಲಿ ಪೂರೈಸಿ 1988 ರಲ್ಲಿ ಸೇವೆಗೆ ಸೇರಿದ ಇವರು ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಪುಷ್ಪಲತಾ ಎಸ್
ಸ.ಹಿ.ಪ್ರಾ.ಶಾಲೆ ಕಿನ್ನಿಕಂಬಳ
ಮಂಗಳೂರು ದಕ್ಷಿಣ

ದಿನಾಂಕ 19.12.1962 ರಲ್ಲಿ ಜನಿಸಿದ ಇವರು ದಿನಾಂಕ 25.10.1982 ರಲ್ಲಿ ಸೇವೆಗೆ ಸೇರಿದ ಇವರು ಆದ್ಯಪಾಡಿ ,ಚಿತ್ರಾಪು, ಬಸ್ತಿ ಗಾರ್ಡನ್, ಪರಪಾದೆ,ಕಿನ್ನಿಕಂಬಳ ಶಾಲೆ ಗಳಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಶಶಿಕಲಾ ಕೆ
ಸರಕಾರಿ ಉರ್ದು.ಹಿ.ಪ್ರಾ.ಶಾಲೆ ಗುರುಕಂಬಳ.
ಮಂಗಳೂರು ದಕ್ಷಿಣ

ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದಲ್ಲಿ ದಿನಾಂಕ 06.12.1962 ರಲ್ಲಿ ಜನಿಸಿದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶ್ರೀ ಅನ್ನಪೂರ್ಣೇಶ್ವರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಅಗಲ್ಪಾಡಿ ಕಾಸರಗೋಡು ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರಸ್ವತಿ ಶಿಕ್ಷಣ ತರಬೇತಿ ಸಂಸ್ಥೆ ಮಡಿಕೇರಿ ಇಲ್ಲಿ ಪೂರೈಸಿ ದಿನಾಂಕ 14.07.1998 ರಲ್ಲಿ ಸ.ಕಿ.ಪ್ರಾ.ಶಾಲೆ ನಡುಗುಡ್ಡೆ ಇಲ್ಲಿ ಸೇವೆಗೆ ಸೇರಿದ ಇವರು 12 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 01.07.2012 ರಲ್ಲಿ ದ.ಕ.ಜಿ.ಪಂ.ಉರ್ದು ಹಿ.ಪ್ರಾ.ಶಾಲೆ ಗುರುಕಂಬಳ ಇಲ್ಲಿಗೆ ಹೆಚ್ಚುವರಿ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಲತ
ಸ.ಹಿ.ಪ್ರಾ ಶಾಲೆ ಕುಂಪಳ
ಮಂಗಳೂರು ದಕ್ಷಿಣ

ಸರಕಾರಿ ಶಾಲೆ ಕುಂಪಳದ ಶಿಕ್ಷಕಿಯಾದ ಲತಾ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಸೇವೆಯಿಂದ ನಿವೃತ್ತಿಯೇ ಹೊರತು ಪ್ರವೃತ್ತಿಯಿಂದ ಅಲ್ಲ ಎನ್ನುವ ಮಾತಿನಂತೆ ತಮ್ಮ ಸೇವೆಯು ನಿರಂತರವಾಗಿ ಸಮಾಜಕ್ಕೆ ಇನ್ನಷ್ಟು ದೊರಕಲಿ ಎನ್ನುವ ಆಶಯದೊಂದಿಗೆ ತಮಗೆ ದೇವರು ಆಯುರಾರೋಗ್ಯ, ಐಶ್ವರ್ಯ, ನೆಮ್ಮದಿ ಕರುಣಿಸಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Related Posts

Leave a Comment